Advertisement

ಇಂದಿನಿಂದ ಕರಾವಳಿಯ ಕೆಲವು ಕಡೆ ಲಘು ಮಳೆ ಸಾಧ್ಯತೆ

11:05 PM Mar 13, 2023 | Team Udayavani |

ಬೆಂಗಳೂರು: ಸೋಮವಾರ ಬೆಳಗ್ಗೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯಾದ್ಯಂತ ಒಣಹವೆ ಇತ್ತು. ಈ ಅವಧಿಯಲ್ಲಿ ಕಾರವಾರದಲ್ಲಿ ಅತ್ಯಧಿಕ 37.1 ಡಿಗ್ರಿ ಸೆ., ಬಾಗಲ ಕೋಟೆಯಲ್ಲಿ ಅತೀ ಕನಿಷ್ಠ 14 ಡಿಗ್ರಿ ಸೆ. ದಾಖಲಾಯಿತು.

Advertisement

ಮಳೆ ಸಾಧ್ಯತೆ
ಬುಧವಾರ ಬೆಳಗ್ಗೆ ವರೆಗಿನ ಅವಧಿಯಲ್ಲಿ ಕರಾವಳಿಯ ಕೆಲವು ಕಡೆ ಲಘು ಮಳೆಯಾಗುವ ಸಾಧ್ಯತೆ ಇದೆ. ಮಾ. 14-15ರಂದು ಕಾಸರಗೋಡು ಸೇರಿದಂತೆ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳಲ್ಲಿ ಮೋಡ, ಕೆಲವು ಕಡೆ ತುಂತುರು ಮಳೆಯಾಗಲಿದೆ.

ಮಂಗಳೂರಿನಲ್ಲಿ ಮಾ. 13ರಂದು 35 ಡಿಗ್ರಿ ಸೆ. ಇದ್ದರೆ ಮಾ. 14, 15 ರಂದು ಮೋಡ-ಬಿಸಿಲು ಇರಲಿದ್ದು 36 ಡಿಗ್ರಿ ಸೆ. ತಾಪಮಾನ ಇರಲಿದೆ. ಮಾ. 16, 17 ಮತ್ತು 18ರಂದು ಉಷ್ಣಾಂಶ 38 ಡಿಗ್ರಿ ಸೆ. ವರೆಗೆ ಹೆಚ್ಚುವ ಸಾಧ್ಯತೆಯಿದ್ದು, ಮೋಡದ ವಾತಾವರಣ, ಮಳೆ ಸಾಧ್ಯತೆ ಇದೆ.

ಮುಂದುವರಿದ ಬಿಸಿಲ ಝಳ
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಉಷ್ಣಾಂಶ ಏರುಗತಿಯಲ್ಲೇ ಮುಂದುವರಿದಿದ್ದು, ಸೋಮ ವಾರವೂ ಬೆಳಗ್ಗಿನಿಂದಲೇ ಬಿಸಿಲ ಝಳವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next