Advertisement

ಕಾವ್ಯ ಮಲ್ಲಿಗೆ: ಅಬ್ಬರದ ಮಳೆರಾಯನ

06:18 PM Jun 13, 2021 | Team Udayavani |

ದಿಬ್ಬಣದ ದಿನ

Advertisement

ಇಳೆಯಿಂದ ಹೊಮ್ಮಿ ಧರೆಯಲ್ಲಿ ಪುಟಿಸಲು…

ಮುಸುಕಿದ ಮೋಡ, ಗುಡುಗು, ಸಿಡಿಲುಗಳ ದಿಬ್ಬಣದೊಂದಿಗೆ ಆಗಮಿಸುವ ಮಳೆರಾಯನು…

ಭೂ ಕುಲಕ್ಕೆ, ಕಾತುರತೆ ನೀಡಿ…

ಉಣಬಡಿಸುವ ಮುತ್ತಿನಂತ ಹನಿಗಳನು…

Advertisement

ಗಿಡ-ಮರಗಳು ಹಾತೊರೆಯುವವು ಸೊಂಪಾಗಲು…

ಕಾದು ಕೆಂಪಾದ ನೆಲವು ಕಾಯುತ್ತಿದೆ ಹಸುರಾಗಲು…

ಜಲಚರ, ಪ್ರಾಣಿ-ಪಕ್ಷಿಗಳು ಕಾದಿಹವು ಜಲಕ್ರೀಡೆಗೆ…

ರೈತರು ಬೇಡುವರು ಸಮೃದ್ಧಿಗೆ…

ಆರ್ಭಟ ಮುಗಿಲ ಮುಟ್ಟಲು ಜಲತಾರೆಗೆ ತವಕ…

ಜುಳು-ಜುಳು ಹರಿಯಲು ನದಿಗಳಿಗೆ ಸಂತಸ…

ಪ್ರಕೃತಿಯು ತಂಪಾಗಲು ಗಾಳಿಗೂ ಕಾತುರ…

ಬಗೆ ಬಗೆಯ ಹಣ್ಣನ್ನು ಸವಿಯುವ ಆತುರ…

ಭೂ ತಾಯಿಯು ಸಜ್ಜಾದಳು ಶೃಂಗಾರಕ್ಕೆ…

ತನ್ನ ಕುಲವನ್ನು ಸಂತೋಷ ಗೊಳಿಸಲಿಕ್ಕೆ…

ಬರೆದಳು ಕವನವನ್ನು ಮಳೆರಾಯನಿಗೆ…

ವೈಭೋಗದಿ ಬರುವ ಮಳೆರಾಯ ಧರೆಗೆ…

 

ಕಾವ್ಯಾ

ಶ್ರೀ ಶಾರದಾ ಕಾಲೇಜು ಬಸ್ರೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next