Advertisement

ವಿಧ್ವಂಸಕ ಕೃತ್ಯಕ್ಕೆ ಯೋಜಿಸಿದ್ದ ಸಂಗತಿ ಬಹಿರಂಗ

08:10 AM Jul 22, 2022 | Team Udayavani |

ಕುಂಬಳೆ: ಬಂದ್ಯೋಡು ಮುಟ್ಟಂನಲ್ಲಿ ಜು. 17ರಂದು ದುಷ್ಕರ್ಮಿಗಳು ರೈಲು ಹಳಿಯ ಮೇಲೆ ಕಲ್ಲುಗ ಳನ್ನಿರಿಸಿ ವಿಧ್ವಂಸಕ ಕೃತ್ಯಕ್ಕೆ ಯೋಜಿಸಿದ್ದ ಸಂಗತಿ  ಬಹಿರಂಗ ಗೊಂಡಿದೆ.

Advertisement

ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಕೋಟಿಕುಳಂ, ಕಣ್ಣಾಪುರಂ, ಕಣ್ಣೂರು ಸೌತ್‌, ವಳಪಟ್ಟಣಂ, ಪಾಪಿನಶ್ಯೆàರಿ ಮತ್ತಿತರ ಕಡೆ ಇಂತಹುದೇ ಕೃತ್ಯ ಎಸಗಲಾಗಿತ್ತು. ಇದನ್ನು ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್‌) ಮತ್ತು ಪೊಲೀಸ್‌ವಿಭಾಗ ಗಂಭೀರವಾಗಿ ಪರಿಗಣಿಸಿದ್ದು,  ಈ ಕೃತ್ಯದಲ್ಲಿ ಉಗ್ರಗಾವಿ ುಗಳ ಕೈವಾಡವಿರುವ ಬಗ್ಗೆಯೂ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಜು. 17ರಂದು ಬಂದ್ಯೋಡು ಸಮೀಪ ಕೃತ್ಯ ಎಸಗಿದ ಸಮಯದಲ್ಲಿ ಮಂಗಳೂರು ಚೆನ್ನೈ ಮೈಲ್‌ ಎಕ್ಸ್‌ ಪ್ರಸ್‌ ಸಾಗಬೇಕಿತ್ತು. ಆದರೆ ರೈಲಿನ ಲೊಕೊ ಪೈಲಟ್‌ ರೈಲು ಹಳಿಯಲ್ಲಿ ಕಲ್ಲಿರಿಸಿದುದನ್ನು ನೋಡಿ ಅಧಿಕಾ ರಿಗಳಿಗೆ ತಿಳಿಸಿದಾಗ ತತ್‌ಕ್ಷಣದ ಕಾರ್ಯಾಚರಣೆಯಲ್ಲಿ ಕಲ್ಲುಗಳನ್ನು ತೆರವುಗೊಳಿಸಿ ಸಂಭಾವ್ಯ ದುರಂತವನ್ನು ತಪ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next