Advertisement

ಕಲಬುರಗಿ: ಸುರಂಗದ ಗೋಡೆ ಕುಸಿದು ರೈಲು ಸಂಚಾರ ಸ್ಥಗಿತ

10:03 AM Oct 07, 2019 | Team Udayavani |

ಕಲಬುರಗಿ: ಮಳೆಯಿಂದ ಬೀದರ್- ಕಲಬುರಗಿ ರೈಲ್ವೆ ಮಾರ್ಗದ‌ ಜಿಲ್ಲೆಯ ಕಮಲಾಪುರ ಸಮೀಪ ಸುರಂಗದ ಗೋಡೆ ಕುಸಿದಿರುವ ಘಟನೆ ರವಿವಾರ ನಡೆದಿದೆ.

Advertisement

ಸುರಂಗದ ಮೇಲ್ಭಾಗದ ಗೋಡೆ ಕುಸಿದು ರೈಲು ಹಳಿ ಮೇಲೆ ಭಾರಿ ಪ್ರಮಾಣದ ಮಣ್ಣು ಮತ್ತು ಕಲ್ಲು ಬಿದ್ದಿದೆ. ಜತೆಗೆ ಮಳೆಯ ನೀರು ಹಳಿ ಮೇಲೆ ನಿಂತಿದೆ. ಇದರಿಂದ ಕಲಬುರಗಿ-ಬೀದರ್ ಡೆಮೋ ರೈಲು ಸಂಚಾರವನ್ನು ಸೋಮವಾರದವರೆಗೆ ಸ್ಥಗಿತಗೊಳಿಸಲಾಗಿದೆ.

ರೈಲ್ವೆ ಸಿಬ್ಬಂದಿ ಈಗಾಗಲೇ ಸ್ಥಳಕ್ಕೆ ದೌಡಾಯಿಸಿದ್ದು, ಜೆಸಿಬಿ ಸಹಾಯದಿಂದ ಮಣ್ಣು, ಕಲ್ಲು ತರೆವುಗೊಳಿಸುವ ಕಾರ್ಯ ನಡೆಯುತ್ತಿದೆ.‌ ಸರಂಗದ ಗೋಡೆ ಕುಸಿದಿರುವುದರಿಂದ ತಾತ್ಕಾಲಿಕವಾಗಿ ಒಂದು‌ ದಿನ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ದುರಸ್ತಿ ಕಾರ್ಯದ ಬಳಿಕ ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.‌

ಈ ರೈಲ್ವೆ ಮಾರ್ಗದಲ್ಲಿ ಕಲಬುರಗಿ- ಬೀದರ್ ನಡುವೆ ಏಕೈಕ ಡೆಮೋ ರೈಲು ಸಂಚರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next