Advertisement

ಕಣಿವೆಯಲ್ಲಿ ರೈಲು ಸೇವೆ ಪುನಾರಾರಂಭ

09:47 AM Nov 28, 2019 | sudhir |

ಶ್ರೀನಗರ: ಜಮ್ಮು ಕಾಶ್ಮೀರದ ಕೆಲವು ಕಡೆಗಳಲ್ಲಿ ರೈಲು ಸೇವೆಯನ್ನು ಪುನಾರಾಂಭಿಸಲಾಗಿದೆ. ಕಾಶ್ಮೀರದ ಶ್ರೀನಗರ ಮತ್ತು ಬನಿಹಾಲ್‌ಗ‌ಳಲ್ಲಿ ಮಂಗಳವಾರವೇ ರೈಲು ಓಡಾಟಕ್ಕೆ ತೆರೆದುಕೊಂಡಿದೆ. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಸಂವಿಧಾನ 370ನೇ ವಿಧಿಯನ್ನು ಹಿಂಪಡೆದ ಬಳಿಕ ಭದ್ರತಾ ಕಾರಣಕ್ಕೆ ರೈಲು ಸೇವೆಯನ್ನು ಕೆಲವು ದಿನಗಳ ವರೆಗೆ ತಡೆ ಹಿಡಿಯಲಾಗಿತ್ತು.

Advertisement

ಇದೀಗ ಅಲ್ಲಿನ ಪರಿಸ್ಥಿತಿ ಸಹಜಸ್ಥಿತಿಗೆ ಬರುತ್ತಿದ್ದು ಈ ಹಿನ್ನೆಲೆಯಲ್ಲಿ ರೈಲು ಸೇವೆಯನ್ನು ಮತ್ತೆ ಒದಗಿಸಲಾಗಿದೆ. ಇದರಿಂದ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ. ಬಾರಮುಲ್ಲಾದಿಂದ ಬನಿಹಾಲ್‌ಗೆ 138 ಕಿ.ಮೀ. ಪ್ರಯಾಣಿಸಬೇಕಾಗಿದ್ದು, ಇನ್ನು ರೈಲಿನ ಮೂಲಕ ತೆರಳಬಹುದಾಗಿದೆ. ಅಗಸ್ಟ್‌ 3ರ ಬಳಿಕ 3 ತಿಂಗಳು ತೀವ್ರ ಭದ್ರತಾ ಕ್ರಮಗಳನ್ನು ಒದಗಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next