Advertisement

ಬಿಜೂರು: ಹಳಿ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ  ರೈಲು ಢಿಕ್ಕಿ; ಗಂಭೀರ

07:47 PM Sep 06, 2022 | Team Udayavani |

ಉಪ್ಪುಂದ: ರೈಲು ಹಳಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ರೈಲು ಢಿಕ್ಕಿ ಹೊಡೆದ ಘಟನೆ  ಮಂಗಳವಾರ ( ಸೆ.6 ರಂದು) ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರ್ಗೋಳಿಹಕ್ಲು ಸಮೀಪ ಸಂಭವಿಸಿದೆ.

Advertisement

ಬಿಜೂರು ಅರೆಕಲ್ಲು ನಿವಾಸಿ ನಾಗಪ್ಪ ಶೇರುಗಾರ ಗಂಭೀರ ಗಾಯಗೊಂಡವರು.

ಅವರು ಮಧ್ಯಾಹ್ನ ಮನೆಯಿಂದ ಡೈರಿಗೆ ಹಾಲು ಕೊಡಲು ರೈಲು ಹಳಿಯ ಬದಿಯಲ್ಲಿ  ಹೋಗುತ್ತಿದ್ದ ಸಂದರ್ಭ ರೈಲು ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next