Advertisement

Shankaranarayana ಇಸ್ಪೀಟ್‌ ಜುಗಾರಿ ಅಡ್ಡೆಗೆ ದಾಳಿ: 13 ಮಂದಿ ವಶಕ್ಕೆ

11:51 PM Aug 16, 2023 | Team Udayavani |

ಶಂಕರನಾರಾಯಣ: ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ದೊಡ್ಮನೆ ಎಂಬಲ್ಲಿ ಸರಕಾರಿ ಹಾಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗುಂಪುಗೂಡಿಕೊಂಡು ಇಸ್ಪೀಟ್‌ ಎಲೆಗಳಿಂದ ಹಣವನ್ನು ಪಣವಾಗಿರಿಸಿ ಅಂದರ್‌ ಬಾಹರ್‌ ಜುಗಾರಿ ಆಟ ಅಡುತ್ತಿದ್ದಲ್ಲಿಗೆ ಆ. 15ರಂದು ಶಂಕರನಾರಾಯಣ ಪೊಲೀಸ್‌ ಠಾಣೆ ಉಪನಿರೀಕ್ಷಕ ನಾಸೀರ್‌ ಹುಸೇನ್‌ ಅವರು ದಾಳಿ ನಡೆಸಿ 13 ಮಂದಿಯನ್ನು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ.

Advertisement

ಆರೋಪಿಗಳಾದ ಶ್ರೀನಿವಾಸ ಆಚಾರಿ (62), ಕರಿಯ ಶೆಟ್ಟಿ (55), ರಘರಾಮ ಶೆಟ್ಟಿ (67), ವಿನಯ ಕುಮಾರ್‌ (33), ಶೇಖರ ಶೆಟ್ಟಿ (66), ಶಂಕರ ಶೆಟ್ಟಿ (48), ಬಸವ ಪೂಜಾರಿ (65), ಸತೀಶ ಶೆಟ್ಟಿ (32), ನಾಗ ಕೊಠಾರಿ (65), ವಿಜೇಂದ್ರ ಭಂಡಾರಿ (39), ನಾಗರಾಜ್‌ ಶೆಟ್ಟಿ (63), ಸುಧಾಕರ ಶೆಟ್ಟಿ (55), ರಾಜೀವ ಶೆಟ್ಟಿ (72) ಅವರನ್ನು ವಶಕ್ಕೆ ಪಡೆಯಲಾಗಿದೆ. ಅವರಿಂದ ಆಟಕ್ಕೆ ಬಳಸಲಾಗಿದ್ದ 14,770 ರೂ. ನಗದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next