Advertisement

ರಾಯಚೂರು: ಅಪಘಾತದಲ್ಲಿ ಮೃತಪಟ್ಟ ಕೋತಿ ಅಂತ್ಯ ಸಂಸ್ಕಾರ

01:03 PM Jun 29, 2022 | Team Udayavani |

ರಾಯಚೂರು: ಸಾರಿಗೆ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದ ಕೋತಿಯನ್ನು ಗ್ರಾಮದ‌ ಯುವಕರು ವಿಧಿವಿಧಾನಗಳ ಅನುಸಾರ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ಸಮೀಪದ ಯರಮರಸ್ ನಲ್ಲಿ ನಡೆದಿದೆ.

Advertisement

ಬುಧವಾರ ಬೆಳಗ್ಗೆ ಶಕ್ತಿನಗರಕ್ಕೆ ಹೊರಟಿದ್ದ ಬಸ್ ಢಿಕ್ಕಿ ಹೊಡೆದಿದ್ದರಿಂದ ಕೋತಿ ಸ್ಥಳದಲ್ಲೇ ಮೃತಪಟ್ಟಿದೆ‌. ಇದನ್ನು ಗಮನಿಸಿದ ಸ್ಥಳೀಯ ಯುವಕರು ಸಮೀಪದ ನಕ್ಕಲು ಹನುಮಪ್ಪ ದೇವಸ್ಥಾನ ಬಳಿ ಗುಂಡಿ ಅಗೆದು ಹೂ ಹಣ್ಣು ಕಾಯಿ ಕರ್ಪೂರಗಳಿಂದ ಪೂಜೆ ನೆರವೇರಿಸಿ,  ಅಂತ್ಯಕ್ರಿಯೆ ನೆರವೇರಿಸಿದರು. ಸಮಾಧಿ ಮೇಲೆ ಸಸಿ ನೆಡಲಾಯಿತು.

ಗ್ರಾಮದ ಯುವಕರಾದ ಮಹೇಶ್ , ಪ್ರಕಾಶ್ ಪೋಸ್ಟ್, ಶಿವಕುಮಾರ್ ನಾಯಕ್, ಮಹೇಶ್ ನಾಯಕ್, ರಮೇಶ್ ಪೂಜಾರಿ, ರಂಗನಾಥ ಭಜಂತ್ರಿ, ತಿಮ್ಮಪ್ಪ ಗಿಣಿಗೇರಿ, ಬಸವರಾಜ, ರಮೇಶ್, ರವಿಕುಮಾರ್ ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next