Advertisement

Raichur: ಶ್ರಾವಣ ಸೋಮವಾರ ದೇವರ‌ ದರ್ಶನ ಪಡೆದ ಶಾಸಕ ದದ್ದಲ್

01:05 PM Aug 05, 2024 | Team Udayavani |

ರಾಯಚೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದಲ್ಲಿ ಎಸ್ಐಟಿ ಹಾಗೂ ಇಡಿ ವಿಚಾರಣೆ ಎದುರಿಸುತ್ತಿರುವ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಬಹಳ ದಿ‌ನಗಳ ಬಳಿಕ ಕ್ಷೇತ್ರದಲ್ಲಿ ಕಂಡು ಬಂದರು.

Advertisement

ಶ್ರಾವಣ ಮಾಸದ ಮೊದಲನೇ ಸೋಮವಾರದ ಪ್ರಯುಕ್ತ ತಾವು ಪ್ರತಿನಿಧಿಸುವ ಗ್ರಾಮೀಣ ಕ್ಷೇತ್ರದಲ್ಲಿರುವ ದೇವಸೂಗುರಿನ ಶ್ರೀ ಸೂಗುರೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಬೆಂಬಲಿಗರ ಜತೆ ಫೋಟೊ ತೆಗೆದುಕೊಂಡರು.

ಈ ವೇಳೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು,‌ ಅವರ ಆಪ್ತರು ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next