Advertisement

ಕೋವಿಡ್‌ನಿಂದ ಮಹಿಳೆ ಸಾವು

12:33 PM Jul 09, 2020 | Naveen |

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್‌ ಸಂಖ್ಯೆ ಹೆಚ್ಚಳದ ಜತೆಗೆ ನಿಧಾನಕ್ಕೆ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ಬುಧವಾರ ಬೆಳಗಿನ ಜಾವ ಕೂಡ ಮಹಿಳೆಯೊಬ್ಬರು ಮೃತಪಟ್ಟಿದ್ದಾಳೆ.

Advertisement

ಕೋವಿಡ್ ಪಾಸಿಟಿವ್‌ ಬಂದಿದ್ದ ಮಹಿಳೆ ಮಾನ್ವಿ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದು, ನ್ಯೂಮೋನಿಯಾ, ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದಳು. ಕೋವಿಡ್ ಪಾಸಿಟಿವ್‌ ವ್ಯಕ್ತಿ ಸಂಪರ್ಕದಿಂದ ಮಹಿಳೆಗೆ ಸೋಂಕು ತಗುಲಿತ್ತು. ಈಕೆಯಿಂದ ಕೂಡ ಕುಟುಂಬದ ಎಂಟು ಸದಸ್ಯರಿಗೆ ಸೋಂಕು ತಗುಲಿತ್ತು. ಪಾಸಿಟಿವ್‌ ದೃಢಪಟ್ಟ ಕಾರಣ ಕೆಲ ದಿನಗಳ ಹಿಂದೆ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಆದರೆ, ತಜ್ಞ ವೆೃದ್ಯರ ಸಮಿತಿ ಸಾವಿನ ವರದಿ ಪಡೆದು ತನಿಖೆ ನಡೆಸಿದ್ದು, ಖಚಿತಪಡಿಸಬೇಕಿದೆ.

ನಗರದಲ್ಲಿ ಹೆಚ್ಚಿದ ಸೋಂಕು: ಇನ್ನೂ ಜಿಲ್ಲೆಯಲ್ಲಿ ಬುಧವಾರ ಮತ್ತೆ 17 ಕೋವಿಡ್‌-19ನ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, ಅದರಲ್ಲಿ 14 ನಗರದಲ್ಲಿದ್ದರೆ, ಮೂರು ಶಕ್ತಿನಗರದಲ್ಲಿ ದೃಢಪಟ್ಟಿವೆ. ಶಕ್ತಿನಗರದ ಮೂವರು, ನಗರದ ಮಕ್ತಲ್‌ ಪೇಟೆಯ ಇಬ್ಬರು, ಗಂಗಾನಿವಾಸದ ಒಬ್ಬರು, ಮಡ್ಡಿಪೇಟೆ ಒಬ್ಬರು, ಬ್ರೇಸ್ತವಾರ ಪೇಟೆಯ ಒಬ್ಬರು, ನಗರದ 9 ಜನ ಸೇರಿದಂತೆ 17 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ ಆರು ಸಾರಿ ಪ್ರಕರಣಗಳು, ಎರಡು ಐಎಲ್‌ಐ ಪ್ರಕರಣಳಿದ್ದರೆ, ಒಬ್ಬರು ತೆಲಂಗಾಣದಿಂದ ಹಿಂದುರುಗಿದವರಲ್ಲಿ ಕಂಡು ಬಂದಿದೆ. ಉಳಿದವರ ಸಂಪರ್ಕ ಪತ್ತೆ ಕಾರ್ಯ ನಡೆಸಲಾಗಿದೆ. ಇದರಿಂದ ಒಟ್ಟು 615 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಂತಾಗಿದೆ. ಅವರಲ್ಲಿ ಚಿಕಿತ್ಸೆ ಪಡೆದು 442 ಜನರು ಸಂಪೂರ್ಣ ಗುಣಮುಖರಾಗಿದ್ದು, ಇನ್ನೂ 168 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯ ದೇವದುರ್ಗ ತಾಲೂಕಿನಿಂದ 99, ಲಿಂಗಸುಗೂರು ತಾಲೂಕಿನಿಂದ 90, ಮಾನ್ವಿ ತಾಲೂಕಿನಿಂದ 83, ಸಿಂಧನೂರು ತಾಲೂಕಿನಿಂದ 56 ಮತ್ತು ರಾಯಚೂರು ತಾಲೂಕಿನಿಂದ 69 ಸೇರಿದಂತೆ ಒಟ್ಟು 397 ಜನರ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಹಿಂದೆ ಕಳುಹಿಸಲಾಗಿದ್ದ ವರದಿಗಳಲ್ಲಿ 253 ನೆಗೆಟಿವ್‌ ಆಗಿವೆ. ಜಿಲ್ಲೆಯಿಂದ ಈವರೆಗೆ ಒಟ್ಟು 26,388 ಜನರ ಗಂಟಲಿನ ದ್ರವ್ಯ ಮಾದರಿಯನ್ನು ಫಿ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ 23,599 ವರದಿಗಳು ನೆಗೆಟಿವ್‌ ಆಗಿವೆ. ಉಳಿದ 2,168 ಸ್ಯಾಂಪಲ್‌ಗ‌ಳ ಫಲಿತಾಂಶ ಬರಬೇಕಿದೆ. ಫಿವರ್‌ ಕ್ಲಿನಿಕ್‌ಗಳಲ್ಲಿ ಬುಧವಾರ 752 ಜನರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ಒಟ್ಟು 135 ಜನರನ್ನು ಸಾಂಸ್ಥಿಕ ಕ್ವಾರಂಟೆೃನ್‌ನಲ್ಲಿ ಇರಿಸಿ ನಿಗಾವಹಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next