Advertisement

Raichur; ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆ: ಮಗಳ ಸ್ಥಿತಿ ಗಂಭೀರ

05:56 PM Mar 09, 2024 | Team Udayavani |

ರಾಯಚೂರು:ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಕುಟುಂಬದ ಪೈಕಿ ಗಂಡ ಮತ್ತು ಹೆಂಡತಿ ಸಾವಿಗೀಡಾಗಿದ್ದು,ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ನಗರ ಹೊರವಲಯದಲ್ಲಿ ಶನಿವಾರ ನಡೆದಿದೆ.

Advertisement

ಬೈಪಾಸ್ ರಸ್ತೆಯ ಓವರ್ ಬ್ರಿಡ್ಜ್ ಕೆಳಗಿನ ರೈಲು ಹಳಿ ಬಳಿ ದುರ್ಘಟನೆ ಸಂಭವಿಸಿದೆ. ಗಂಡ-ಹೆಂಡತಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ನಗರದ ಜ್ಯೋತಿ ಕಾಲೋನಿ ನಿವಾಸಿಗಳಾದ ಸಮೀರ್ ಅಹ್ಮದ್(44), ಜುಲ್ಲೇಕಾ‌ ಬೇಗಂ (40) ಮೃತರು ಎಂದು ಗುರುತಿಸಿದ್ದು, ಮಗಳು ಮೈಮೂಲಾ ಸ್ಥಿತಿ ಗಂಭೀರವಾಗಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಮೃತದೇಹಗಳನ್ನು ರಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ರಾಯಚೂರು ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next