Advertisement

ರಾಯಚೂರು: ಬಸ್ ಬೈಕ್ ನಡುವೆ ಅಪಘಾತ; ತಂದೆ ಮಗ ಸಾವು

12:10 PM Sep 14, 2022 | Team Udayavani |

ರಾಯಚೂರು: ಬೈಕ್ ಹಾಗೂ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ತಂದೆ – ಮಗ ಮೃತಪಟ್ಟ ಧಾರುಣ ಘಟನೆ ಲಿಂಗಸೂಗುರು ತಾಲೂಕಿನ ವಂದಲಿ ಹೊಸುರು ಬಳಿ ಬುಧವಾರ ನಡೆದಿದೆ.

Advertisement

ಹಟ್ಟಿಯಿಂದ ದೇವದುರ್ಗಕ್ಕೆ ಹೊರಟಿದ್ದ ಸರ್ಕಾರಿ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ. ವಂದಲಿ ಗ್ರಾಮದ ಬೈಕ್ ಸವಾರ ರಮೇಶ್(35) ಹಾಗೂ ಅತನ ಮಗ ಅಮರೇಶ್ (11) ಮೃತರು ಎಂದು ತಿಳಿದು ಬಂದಿದೆ.

ಬೆಳಗ್ಗೆ ಹೊಲಕ್ಕೆ ಮೇವು ತರಲು ಹೋಗಿ ಮರಳಿ ಬರುವಾಗ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಳ್ಳಾರಿ: ಕೃಷಿ ಕಾರ್ಮಿಕರಿದ್ದ ಆಟೋ ಕಾಲುವೆಗೆ ಪಲ್ಟಿ; ಮೂವರು ಸಾವು, ಮೂವರು ನಾಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next