Advertisement

ಛಲವಾದಿ ಸಮುದಾಯ ಪ್ರಗತಿಗೆ ಚುನಾಯಿತರು ಶ್ರಮಿಸಲಿ

04:12 PM Feb 14, 2021 | Team Udayavani |

ರಾಯಚೂರು: ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಹೊಸದಾಗಿ ಆಯ್ಕೆಯಾದವರು ಹಿಂದುಳಿದ ಛಲವಾದಿ ಸಮಾಜದ ಅಭಿವೃದ್ಧಿಗೆ ಶಕ್ತಿ ಮೀರಿ
ಶ್ರಮಿಸಬೇಕು ಎಂದು ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಶಿವರಾವå ಕರೆ ನೀಡಿದರು.

Advertisement

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಛಲವಾದಿ ಮಹಾಸಭಾದಿಂದ ಶನಿವಾರ ಆಯೋಜಿಸಿದ್ದ ಸ್ಥಳೀಯ ಸಂಸ್ಥೆಗಳಿಗೆ
ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಧಿಕಾರ ಮಿತಿಯೊಳಗೆ ಏನೆಲ್ಲ ಸೌಲಭ್ಯ ಸಿಗುತ್ತವೆಯೋ ಅವುಗಳನ್ನು ಜನರಿಗೆ ತಲುಪಿಸಬೇಕು. ಗ್ರಾಮ ಪಂಚಾಯಿತಿಗಳಿಗೆ ಸಾಕಷ್ಟು ಅನುದಾನ, ವಿವಿಧ ಯೋಜನೆಗಳಲ್ಲಿ ಅನೇಕ ಕಾರ್ಯಕ್ರಮಗಳು ರೂಪಿಸಲಾಗಿದೆ. ಅವುಗಳನ್ನು ಜನರಿಗೆ ತಲುಪಿಸಬೇಕು ಎಂದರು.

ಡಾ| ಅಂಬೇಡ್ಕರ್‌ ಅವರು ಎಲ್ಲರಿಗೂ ಮತ ಚಲಾಯಿಸುವ ಹಕ್ಕು ನೀಡಿದ್ದಾರೆ. ಅದನ್ನು ಬಳಸಿ ಉತ್ತಮರನ್ನು ಆಯ್ಕೆ ಮಾಡಬೇಕು. ಹಣದಾಸೆಗೆ
ಸಿಲುಕಿ ಮತ ಮಾಡಿಕೊಂಡರೆ ನಮ್ಮದೇ ಸಮಾಜ ಹಿಂದುಳಿಯಲು ನಾವೇ ಕಾರಣರಾಗುತ್ತೇವೆ. ಡಾ| ಅಂಬೇಡ್ಕರ್‌ ಅವರ ಜೀವನ ಚರಿತ್ರೆ ತಿಳಿಯಬೇಕು ಎಂದರು.

ಶಾಸಕ ಬಸನಗೌಡ ದದ್ದಲ್‌ ಮಾತನಾಡಿ, ಹೊಸದಾಗಿ ಆಯ್ಕೆಯಾದ ಜನಪ್ರತಿನಿಧಿ ಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಿ.
ಸಮಾಜದ ಅಭಿವೃದ್ಧಿಗೆ ಒತ್ತುಕೊಡಿ ಎಂದರು. ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ್‌ ಇಟಗಿ ಮಾತನಾಡಿದರು. ನಗರ ಶಾಸಕ ಡಾ|
ಶಿವರಾಜ ಪಾಟೀಲ್‌, ಮಹಾಸಭಾದ ಜಿಲ್ಲಾಧ್ಯಕ್ಷ ಜಗನ್ನಾಥ ಸುಂಕಾರಿ, ನಗರ ಘಟಕ ಅಧ್ಯಕ್ಷ ಸತ್ಯನಾರಾಯಣ, ಉಪನ್ಯಾಸಕ ರಾಮಚಂದ್ರಪ್ಪ
ಶಿವಂಗಿ, ಕೃಷಿ ಇಲಾಖೆಯ ಸರಸ್ವತಿ, ಕಾರ್ಮಿಕ ಇಲಾಖೆಯ ಅಧಿ ಕಾರಿ ಜನಾರ್ಧನ, ಮಹಾಸಭಾದ ತಾಲ್ಲೂಕು ಅಧ್ಯಕ್ಷ ಆಂಜನೇಯ, ನಗರಸಭೆ ಸದಸ್ಯ ಬಿ.ರಮೇಶ, ಶಿವರಾಜ ಪನ್ನೂರು, ರಾಮಕೃಷ್ಣ, ಮಲ್ಲಪ್ಪ ಸರ್ಜಾಪುರ ಇದ್ದರು. ವೀರಭದ್ರಪ್ಪ ನಿರೂಪಿಸಿದರು.

ಓದಿ : ಸಿರವಾರ: ಲಕ್ಷಾಂತರ ರೂ. ಮೌಲ್ಯದ ಪುರಾತನ ಉತ್ಸವ ಮೂರ್ತಿ ಕಳವು

Advertisement
Advertisement

Udayavani is now on Telegram. Click here to join our channel and stay updated with the latest news.

Next