Advertisement

ಮುನಿಸಿರುವ ನಿತೀಶ್‌ರನ್ನು ಒಲಿಸಲು ರಾಹುಲ್‌ ಸಜ್ಜು

03:45 AM Jul 07, 2017 | Team Udayavani |

ಪಾಟ್ನಾ: ವಿಪಕ್ಷಗಳು ಅದರಲ್ಲೂ ಕಾಂಗ್ರೆಸ್‌ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರ ಮನವೊಲಿಸಲು ಇದೀಗ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮುಂದಾಗಿದ್ದಾರೆ.

Advertisement

ವಿದೇಶ ಪ್ರವಾಸದಿಂದ ವಾಪಸಾಗಿರುವ ಅವರು ಮಹಾಮೈತ್ರಿಯಲ್ಲಿ ಪ್ರಮುಖರೆನಿಸಿರುವ ನಿತೀಶ್‌ ದೂರ ಹೋಗದಂತೆ ನೋಡಿಕೊಳ್ಳಲು ಕಾರ್ಯತಂತ್ರ ರೂಪಿಸಿದ್ದಾರೆ. ಅದರಂತೆ, ಪಕ್ಷದ ಯಾರು ಕೂಡ ನಿತೀಶ್‌ ವಿರುದ್ಧ ತುಟಿಪಿಟಿಕ್ಕೆನ್ನಬಾರದು ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಬಿಹಾರದ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಚೌಧರಿ ಅವರನ್ನು ದಿಲ್ಲಿಗೆ ಕರೆಸಿಕೊಂಡು ರಾಹುಲ್‌ ಈ ಕುರಿತು ಮಾತುಕತೆ ನಡೆಸಿದ್ದಾರೆ.

ಇದೇ ವೇಳೆ, ರಾಹುಲ್‌ ಮುಂದಿನ ವಾರ ವಿಪಕ್ಷಗ ನಾಯಕರ ಸಭೆ ನಡೆಸಲಿದ್ದಾರೆ ಮಾತ್ರವಲ್ಲ ನಿತೀಶ್‌ರನ್ನು ವೈಯಕ್ತಿಕವಾಗಿ ಭೇಟಿಯಾಗಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್‌ ನಾಯಕ ಗುಲಾಂ ನಬಿ ಹಾಗೂ ಬಿಹಾರದ ಕೆಲವು ಕಾಂಗ್ರೆಸ್‌ ನಾಯಕರು ಆಡಿದ್ದ ಮಾತುಗಳು ನಿತೀಶ್‌ರಲ್ಲಿ ಆಕ್ರೋಶ ಮೂಡಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next