Advertisement

ರಾಹುಲ್‌ ನಮಾಜಿಗೆ ಕುಳಿತವರಂತೆ ದೇವಳದಲ್ಲಿ ಕೂರುತ್ತಾರೆ: ಯೋಗಿ

11:24 AM Nov 22, 2017 | udayavani editorial |

ಲಕ್ನೋ : ‘ಚುನಾವಣೆಗೆ ಪೂರ್ವಭಾವಿ ಸಿದ್ಧತೆ ಎಂಬಂತೆ ದೇವಸ್ಥಾನದಿಂದ ದೇವಸ್ಥಾನಕ್ಕೆ ಹೋಗುತ್ತಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ “ದೇವಸ್ಥಾನದಲ್ಲಿ ಹೇಗೆ ಕುಳಿತುಕೊಳ್ಳಬೇಕು ಎಂಬುದೇ ಗೊತ್ತಿಲ್ಲ; ಆತ ಮಸೀದಿಯಲ್ಲಿ ನಮಾಜ ಮಾಡುವ ರೀತಿಯಲ್ಲಿ ದೇವಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ’ ಎಂದು ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಟೀಕಿಸಿದ್ದಾರೆ.

Advertisement

“ರಾಹುಲ್‌ ಗಾಂಧಿ ಅವರು ಈಚೆಗೆ ವಾರಾಣಸಿಯ ಕಾಶೀ ವಿಶ್ವನಾಥ ದೇವಸ್ಥಾನಕ್ಕೆ ಹೋಗಿದ್ದಾಗ ಅಲ್ಲಿ ಅವರು ಕುಳಿತ ಭಂಗಿ ಮಸೀದಿಯಲ್ಲಿ  ನಮಾಜು ಮಾಡುವ ರೀತಿಯಲ್ಲಿತ್ತು; ಇದನ್ನು ಕಂಡ ಅಲ್ಲಿನ ಅರ್ಚಕರು, “ದೇವಸ್ಥಾನದಲ್ಲಿ ನೀವು ಹೀಗೆ ಕೂರುವಂತಿಲ್ಲ; ಪಾಲ್ಟಿ ಹಾಕಿ (ಚಕ್ಕಳಮಕ್ಕಳ) ಕೂರಬೇಕು’ ಎಂದು ರಾಹುಲ್‌ ಗಾಂಧಿಗೆ ಹೇಳಿದರು’ಎಂಬುದಾಗಿ ಸಿಎಂ ಆದಿತ್ಯನಾಥ್‌ ಹೇಳಿದರು.

ಅದೇನಿದ್ದರೂ ಚುನಾವಣೆಗಾಗಿ ದೇವಸ್ಥಾನದಿಂದ ದೇವಸ್ಥಾನಕ್ಕೆ ಓಡುತ್ತಿರುವ ರಾಹುಲ್‌ ಗಾಂಧಿ ಅವರ ಮನಸ್ಸು ಈ ಕಾರಣದಿಂದಾದರೂ ಪರಿಶುದ್ಧವಾಗಲೆಂದು ಹಾರೈಸುತ್ತೇನೆ ಎಂದು ಯೋಗಿ ತಿಳಿಸಿದರು.

ರಾಹುಲ್‌ ಗಾಂಧಿ ಕೇವಲ ಮತಗಳಿಗಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆಯಾದರೆ, ಕಾಂಗ್ರೆಸ್‌ ರಾಹುಲ್‌ ಗಾಂಧಿಯನ್ನು ಸಮರ್ಥಿಸಿಕೊಂಡು “ದೇವರನ್ನು ಧ್ಯಾನಿಸುವ ವಿಧಾನಕ್ಕೆ ಯಾರಲ್ಲಾರದರೂ ಪೇಟೆಂಟ್‌ ಇದೆಯೇ?’ ಎಂದು ಪ್ರಶ್ನಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next