Advertisement

Congress Leader ಅಹ್ಮದ್‌ ಪಟೇಲ್‌ ವಿರುದ್ಧ ರಾಹುಲ್‌ ಪ್ರತೀಕಾರ: ಬಿಜೆಪಿ

12:45 AM Feb 26, 2024 | Team Udayavani |

ಹೊಸದಿಲ್ಲಿ: ಗುಜರಾತ್‌ನ ಭರೂಚ್‌ ಕ್ಷೇತ್ರವನ್ನು ಆಪ್‌ಗೆ ಬಿಟ್ಟು ಕೊಟ್ಟ ಕಾಂಗ್ರೆಸ್‌ ಕ್ರಮದ ಬಗ್ಗೆ ಬಿಜೆಪಿ ನಾಯಕ ಜೈವೀರ್‌ ಶೆರ್ಗಿಲ್‌ ಲೇವಡಿ ಮಾಡಿ, ದಿ| ಅಹ್ಮದ್‌ ಪಟೇಲ್‌ ವಿರುದ್ಧ ರಾಹುಲ್‌ ಈ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿ “ಹಿರಿಯ ನಾಯಕ ಪಟೇಲ್‌ ಮತ್ತು ರಾಹುಲ್‌ ನಡವೆ ಮಧುರ ಬಾಂಧವ್ಯ ಇರಲಿಲ್ಲ. ಈಗ ಚುನಾವಣೆ ನೆಪದಲ್ಲಿ ಪಟೇಲ್‌ ದೀರ್ಘ‌ ಕಾಲದಿಂದ ಪ್ರಬಲರಾಗಿದ್ದ ಕ್ಷೇತ್ರ ಬಿಟ್ಟುಕೊಟ್ಟು ರಾಹುಲ್‌ ಪ್ರತೀಕಾರ ತೀರಿಸಿಕೊಂಡಿದ್ದಾರೆ’ ಎಂದಿದ್ದಾರೆ. ಭರೂಚ್‌ ಬಿಟ್ಟುಕೊಟ್ಟ ಬಗ್ಗೆ ಪಟೇಲ್‌ ಪುತ್ರಿ ಕೂಡ ಗರಂ ಆಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next