Advertisement

ಇಂದು ಪೆರಿಯಕ್ಕೆ  ರಾಹುಲ್‌ ಗಾಂಧಿ 

01:00 AM Mar 14, 2019 | Team Udayavani |

ಕಾಸರಗೋಡು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾ.14ರಂದು ಪೆರಿಯಕ್ಕೆ ಆಗಮಿಸಲಿದ್ದಾರೆ. ಪೆರಿಯ ಕಲೊÂàಟ್‌ನಲ್ಲಿ ಇತ್ತೀಚೆಗೆ ಕೊಲೆಯಾದ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಾದ ಕೃಪೇಶ್‌ ಮತ್ತು ಶರತ್‌ಲಾಲ್‌ ಅವರ ಕುಟುಂಬಗಳನ್ನು ಭೇಟಿಯಾಗಲಿದ್ದಾರೆ.

Advertisement

ಮಾ.14ರಂದು ಮಧ್ಯಾಹ್ನ 1.30ಕ್ಕೆ ಕಣ್ಣೂರು ವಿಮಾನ ನಿಲ್ದಾಣ ತಲುಪುವ ಅವರು ಬಳಿಕ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಪೆರಿಯ ಕೇಂದ್ರೀಯ ವಿವಿ ಬಳಿಯ ಹೆಲಿಪ್ಯಾಡ್‌ನ‌ಲ್ಲಿ ಬಂದಿಳಿಯುವರು. ಅನಂತರ ಕಾರು ಮೂಲಕ ಪೆರಿಯ ಕಲೊÂàಟ್‌ಗೆ ತೆರಳಲಿದ್ದಾರೆ.

ಮೊದಲು ಕೃಪೇಶ್‌, ಬಳಿಕ ಶರತ್‌ಲಾಲ್‌ ಅವರ ಮನೆಗೆ ಭೇಟಿ ನೀಡಿ ಕುಟುಂಬಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಎರಡು ಮನೆಗಳಲ್ಲಿ ರಾಹುಲ್‌ ಗಾಂಧಿ ತಲಾ ಅರ್ಧ ತಾಸು ಇರುವರು. ಬಳಿಕ ಪೆರಿಯದಿಂದ ಹೆಲಿಕಾಪ್ಟರ್‌ನಲ್ಲಿ ಮಟ್ಟನ್ನೂರಿಗೆ ತೆರಳಿ ಕೊಲೆಗೀಡಾದ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತ ಶುಹೈಬ್‌ ಮನೆಗೆ ಭೇಟಿ ನೀಡಲಿದ್ದಾರೆ. ರಾಹುಲ್‌ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ.

ಎಸ್‌ಪಿಜಿ ತಂಡ ಪೆರಿಯ ಕಲೊÂàಟ್‌ ತಲುಪಿದ್ದು, ಭದ್ರತಾ ಕ್ರಮಗಳ ಕುರಿತು ಅವಲೋಕನ ನಡೆಸಿದೆ. ರಾಹುಲ್‌ ಗಾಂಧಿಯವರ ವಾಹನ ಹಾದುಹೋಗುವ ರಸ್ತೆ, ಶರತ್‌ಲಾಲ್‌, ಕೃಪೇಶ್‌ ಅವರ ಮನೆ ಪರಿಸರ ಸಂಪೂರ್ಣ ಎಸ್‌ಪಿಜಿ ತಂಡದ ನಿಗಾದಲ್ಲಿರುವುದು.

Advertisement

Udayavani is now on Telegram. Click here to join our channel and stay updated with the latest news.

Next