Advertisement

“ಜನರ ಲೂಟಿ, ಇಬ್ಬರ ವಿಕಾಸ” : ರಾಹುಲ್ ವಿವಾದಾತ್ಮಕ ಟ್ವೀಟ್  

02:31 PM Feb 15, 2021 | Team Udayavani |

ನವ ದೆಹಲಿ :  ಎಲ್ ಪಿ ಜಿ ಗ್ಯಾಸ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 50ರೂ. ಏರಿಕೆಯಾಗಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಇಬ್ಬರ ವಿಕಾಸಕ್ಕಾಗಿ ಕೇಂದ್ರ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ ಎಂದು ಗಾಂಧಿ ತಮ್ಮ ಟ್ವೀಟ್ ಖಾತೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಓದಿ : ‘ನಾವು ಜನರ ಗೌಪ್ಯತೆಯನ್ನು ಕಾಪಾಡಬೇಕು’ : ವಾಟ್ಸ್ಯಾಪ್, ಫೇಸ್ ಬುಕ್ ಗೆ “ಸುಪ್ರೀಂ” ಸಲಹೆ

ಎಲ್ ಪಿ ಜಿ ಗ್ಯಾಸ್ ಏರಿಕೆಯಾಗಿರು ಬಗೆಗಿನ ವರದಿಯೊಂದರ ಫೈಲ್ ಶಾಟ್ ನೊಂದಿಗೆ “ಜನತಾ ಸೆ ಲೂಟ್, ಸಿರ್ಫ್ “ದೋ” ಕಾ ವಿಕಾಸ್”  ಎಂದು ಹಿಂದಿಯಲ್ಲಿ ಟ್ವೀಟ್ ಮಾಡುವುದರ ಮೂಲಕ ಮೋದಿ ಸರ್ಕಾರದ ಅಚ್ಛೇ ದಿನ್ ಹಾಗೂ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಯೋಜನೆಯನ್ನು ಕೇರಳದ ವಯನಾಡಿನ ಸಂಸದ ರಾಹುಲ್ ಗಾಂಧಿ ಖಾರವಾಗಿ ಕುಟುಕಿದ್ದಾರೆ.

Advertisement

 

ಇಬ್ಬರ ವಿಕಾಸಕ್ಕಾಗಿ ಎಂದು ರಾಹುಲ್ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದು, ಅವರ ಹೆಸರನ್ನು ಹೇಳಿಲ್ಲ.

ಈ ಹಿಂದೆ ರಾಹುಲ್ ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸುವ ಸಂದರ್ಭದಲ್ಲಿ ಅಂಬಾನಿ ಹಾಗೂ ಅದಾನಿಯವರ ಹೆಸರನ್ನು ಉಲ್ಲೇಖಿಸಿದ್ದರು.

ಓದಿ : ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ. ಯಡಿಯೂರಪ್ಪ ಕುಟುಂಬದ ಸರ್ಕಾರ: ಎಚ್ ಡಿಕೆ

 

Advertisement

Udayavani is now on Telegram. Click here to join our channel and stay updated with the latest news.

Next