ಅಕೋಲಾ (ಮಹಾರಾಷ್ಟ್ರ): ಸ್ವಾತಂತ್ರ್ಯ ವೀರ ಸಾವರ್ಕರ್ ವಿಷಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಶಿವಸೇನೆ ಬಾಳಾಠಾಕ್ರೆ ಬಣದ ಉದ್ಧವ್ ಠಾಕ್ರೆ ನಡುವೆ ಗದ್ದಲವೇರ್ಪಟ್ಟಿದೆ.
ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಅಕೋಲಾದಲ್ಲಿರುವ ರಾಹುಲ್ ಗಾಂಧಿಯವರು, ಗುರುವಾರ ಬೆಳಗ್ಗೆ ಸಾವರ್ಕರ್ ಸ್ವಾತಂತ್ರ್ಯ ಹೋರಾಟ ಗಾರರೇ ಅಲ್ಲ. ಬ್ರಿಟಿಷರಿಗೆ ನೆರವಾಗಿ ದ್ದಲ್ಲದೇ, ಕ್ಷಮಾಪಣೆ ಕೋರಿ ಬ್ರಿಟಿಷರಿಗೆ ಪತ್ರ ಬರೆದಿದ್ದರು ಎಂದು ಆರೋಪಿಸಿದ್ದರು. ಸದ್ಯ ಸಾವರ್ಕರ್ ಅವರ ದೃಷ್ಟಿಕೋನ ಮತ್ತು ಮಹಾತ್ಮಾ ಗಾಂಧಿಯವರ ದೃಷ್ಟಿಕೋನದ ನಡುವೆ ಹೋರಾಟ ನಡೆಯುತ್ತಿದೆ. ಸಾವರ್ಕರ್ ಬ್ರಿಟಿಷರಿಗೆ ಹೆದರಿದ್ದರು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು.
ರಾಹುಲ್ ಅವರ ಈ ಹೇಳಿಕೆಗೆ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿಯ ಅಂಗಪಕ್ಷವಾದ ಶಿವಸೇನೆ ಬಾಳಾ ಠಾಕ್ರೆ ಬಣದ ಉದ್ಧವ್ ಠಾಕ್ರೆ ತಿರುಗೇಟು ನೀಡಿದ್ದಾರೆ. ತಮ್ಮ ಪಕ್ಷ ವೀರ ಸಾವರ್ಕರ್ ಅವರಿಗೆ ಅತ್ಯುನ್ನತ ಗೌರವ ನೀಡು ತ್ತದೆ. ಹಾಗೆಯೇ ರಾಹುಲ್ ಗಾಂಧಿಯವರ ಹೇಳಿಕೆ ಯನ್ನು ಒಪ್ಪುವುದಿಲ್ಲ ಎಂದಿದ್ದಾರೆ.
ಬಿಜೆಪಿ ಕೂಡ ರಾಹುಲ್ ಸ್ವಾತಂತ್ರ್ಯ ಹೋರಾಟ ಗಾರನ ಬಗ್ಗೆ ರಾಹುಲ್ ನಾಚಿಕೆರಹಿತವಾಗಿ ಸುಳ್ಳು ಹೇಳುತ್ತಿದ್ದಾರೆ ಎಂದಿದೆ.