Advertisement
ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಅಧಿಕಾರಿಗಳು ರಾಹುಲ್ ಗಾಂಧಿಯನ್ನು ರಾಜಸ್ಥಾನ್, ಮಧ್ಯಪ್ರದೇಶ ಗಡಿಪ್ರದೇಶದಲ್ಲಿ ವಶಕ್ಕೆ ಪಡೆದು ರಹಸ್ಯ ಸ್ಥಳಕ್ಕೆ ಕರೆದೊಯ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ರಾಜಸ್ಥಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಚಿನ್ ಪೈಲಟ್, ಕಾಂಗ್ರೆಸ್ ಹಿರಿಯ ಮುಖಂಡರಾದ ದಿಗ್ವಿಜಯ್ ಸಿಂಗ್, ಕಮಲ್ ನಾಥ್ ಸಿಂಗ್ ಹಾಗೂ ಶರದ್ ಯಾದವ್ ಅವರನ್ನೂ ಕೂಡಾ ಪೊಲೀಸರು ನೀಮುಚ್ ನಲ್ಲಿ ತಡೆದು ವಶಕ್ಕೆ ತೆಗೆದುಕೊಂಡಿರುವುದಾಗಿ ಮೂಲಗಳು ಹೇಳಿವೆ.ಬಂಧನಕ್ಕೊಳಗಾದ ಸುಮಾರು 3ಗಂಟೆಯ ಬಳಿಕ ರಾಹುಲ್ ಗಾಂಧಿ ಅವರನ್ನು ಜಾಮೀನಿನ ಮೇಲೆ ಪೊಲೀಸರು ಬಿಡುಗಡೆಗೊಳಿಸಿ, ಗೋಲಿಬಾರ್ ನಲ್ಲಿ ಬಲಿಯಾದ ರೈತರ ಕುಟುಂಬಸ್ಥರ ಭೇಟಿ ಮಾಡಲು ಅವಕಾಶ ನೀಡಿರುವುದಾಗಿ ವರದಿ ವಿವರಿಸಿದೆ.
Related Articles
Advertisement
ಪೊಲೀಸರು ನನಗೆ ಯಾವುದೇ ಕಾರಣ ಕೊಟ್ಟಿಲ್ಲ, ಆದರೂ ನನ್ನ ಬಂಧಿಸಿದ್ದಾರೆ. ಉತ್ತರಪ್ರದೇಶದಲ್ಲಿಯೂ ಕೂಡಾ ಇದೇ ರೀತಿ ಮಾಡಿರುವುದಾಗಿ ರಾಹುಲ್ ಆರೋಪಿಸಿದರು.