Advertisement

ಮೈದಾನದ ಸಿಬಂದಿಗೆ ದ್ರಾವಿಡ್‌ ಇನಾಮು

11:36 PM Nov 29, 2021 | Team Udayavani |

ಕಾನ್ಪುರ: ಇಲ್ಲಿನ “ಗ್ರೀನ್‌ಪಾರ್ಕ್‌ ಸ್ಟೇಡಿಯಂ’ನಲ್ಲಿ ಸ್ಪರ್ಧಾತ್ಮಕ ಪಿಚ್‌ ನಿರ್ಮಿಸಿದ ಮೈದಾನದ ಸಿಬಂದಿಗೆ ಕೋಚ್‌ ರಾಹುಲ್‌ ದ್ರಾವಿಡ್‌ 35 ಸಾವಿರ ರೂ. ಬಹುಮಾನ ನೀಡಿ ಗೌರವಿಸಿದ್ದಾರೆ.

Advertisement

ಇದರೊಂದಿಗೆ ಟೀಮ್‌ ಇಂಡಿಯಾದ ಇತರ ಕೋಚ್‌ಗಳಿಗಿಂತ ತಾನೆಷ್ಟು ವಿಭಿನ್ನ ಎಂಬುದನ್ನು ನಿರೂಪಿಸಿದ್ದಾರೆ.

“ಟೀಮ್‌ ಇಂಡಿಯಾದ ನೂತನ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ನಮ್ಮ ಮೈದಾನದ ಸಿಬಂದಿಗೆ 35 ಸಾವಿರ ರೂ. ಬಹುಮಾನ ನೀಡಿದ್ದಾರೆ.

ಇಲ್ಲಿನ ಪಿಚ್‌ ಅವರಿಗೆ ತೃಪ್ತಿ ನೀಡಿದ್ದು, ಇದರಿಂದ ಖುಷಿಗೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ’ ಎಂದು ಉತ್ತರಪ್ರದೇಶ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಇದನ್ನೂ ಓದಿ:ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

Advertisement

ಗ್ರೀನ್‌ಪಾರ್ಕ್‌ ಪಿಚ್‌ ಎಲ್ಲರಿಗೂ ಏಕರೀತಿಯ ನೆರವು ನೀಡಿದ್ದನ್ನು ಗಮನಿಸಬೇಕು. ಶ್ರೇಯಸ್‌ ಅಯ್ಯರ್‌, ಟಾಮ್‌ ಲ್ಯಾಥಂ, ವಿಲ್‌ ಯಂಗ್‌, ವೃದ್ಧಿಮಾನ್‌ ಸಾಹಾ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಅಕ್ಷರ್‌ ಪಟೇಲ್‌, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ ಸ್ಪಿನ್‌ ದಾಳಿಯಲ್ಲಿ ಯಶಸ್ಸು ಕಂಡಿದ್ದರು. ಹಾಗೆಯೇ ಕಿವೀಸ್‌ನ ಟಿಮ್‌ ಸೌಥಿ, ಕೈಲ್‌ ಜೇಮಿಸನ್‌ ವೇಗದ ದಾಳಿಯನ್ನು ಯಶಸ್ವಿಯಾಗಿ ಸಂಘಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next