Advertisement

ಸೆಮಿ ಫೈನಲ್‌ನಲ್ಲಿ ಹೀನಾಯ ಸೋಲು: ಕಣ್ಣೀರು ಹಾಕಿದ ರೋಹಿತ್‌

09:57 PM Nov 10, 2022 | Team Udayavani |

ಆಡಿಲೇಡ್‌:  ಟಿ 20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ಗಳ ಅವಮಾನಕರ ಸೋಲನ್ನು ಅನುಭವಿಸಿದ ಬಳಿಕ ನಾಯಕ ರೋಹಿತ್‌ ಶರ್ಮ ಕಣ್ಣೀರು ಹಾಕಿದ್ದಾರೆ.  ಅವರನ್ನು ತರಬೇತುದಾರ ರಾಹುಲ್‌ ದ್ರಾವಿಡ್‌ ಸಮಾಧಾನಪಡಿಸಿದ್ದಾರೆ. ಅವರ ಕಣ್ಣೀರು ಸಾಮಾಜಿಕ ತಾಣಗಳಲ್ಲಿ ದೊಡ್ಡ ಸುದ್ದಿಯಾಗಿದೆ.

Advertisement

ಈ ಸೋಲಿನಿಂದ ಆಘಾತವಾಗಿದೆ. ಇದನ್ನು ಅರಗಿಸಿಕೊಳ್ಳಲು ನಮ್ಮೆಲ್ಲರಿಗೂ ಕಷ್ಟವಾಗುತ್ತಿದೆ. ನಾವು ಪ್ರತಿ ಹಂತದಲ್ಲೂ ಹೋರಾಡಿದ್ದೇವೆ. ಈ ವಿಶ್ವಕಪ್‌ ವೇಳೆ ನಮಗೆ ಬೆಂಬಲ ನೀಡಿದ ಅಭಿಮಾನಿಗಳಿಗೆ ಮತ್ತು ಬೆಂಬಲ ಸಿಬ್ಬಂದಿಗೆ ಧನ್ಯವಾದಗಳು ಎಂದು ಹಾರ್ದಿಕ್‌ ಪಾಂಡ್ಯ ಟ್ವೀಟ್‌ ಮಾಡಿದ್ದಾರೆ. ಹಾರ್ದಿಕ್‌ ಪಾಂಡ್ಯ ಅವರ ಬಿರುಸಿನ ಆಟದಿಂದಾಗಿ ಭಾರತ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next