Advertisement

ಸೆಮಿ ಫೈನಲ್‌ನಲ್ಲಿ ಹೀನಾಯ ಸೋಲು: ಕಣ್ಣೀರು ಹಾಕಿದ ರೋಹಿತ್‌

09:57 PM Nov 10, 2022 | Team Udayavani |

ಆಡಿಲೇಡ್‌:  ಟಿ 20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ಗಳ ಅವಮಾನಕರ ಸೋಲನ್ನು ಅನುಭವಿಸಿದ ಬಳಿಕ ನಾಯಕ ರೋಹಿತ್‌ ಶರ್ಮ ಕಣ್ಣೀರು ಹಾಕಿದ್ದಾರೆ.  ಅವರನ್ನು ತರಬೇತುದಾರ ರಾಹುಲ್‌ ದ್ರಾವಿಡ್‌ ಸಮಾಧಾನಪಡಿಸಿದ್ದಾರೆ. ಅವರ ಕಣ್ಣೀರು ಸಾಮಾಜಿಕ ತಾಣಗಳಲ್ಲಿ ದೊಡ್ಡ ಸುದ್ದಿಯಾಗಿದೆ.

Advertisement

ಈ ಸೋಲಿನಿಂದ ಆಘಾತವಾಗಿದೆ. ಇದನ್ನು ಅರಗಿಸಿಕೊಳ್ಳಲು ನಮ್ಮೆಲ್ಲರಿಗೂ ಕಷ್ಟವಾಗುತ್ತಿದೆ. ನಾವು ಪ್ರತಿ ಹಂತದಲ್ಲೂ ಹೋರಾಡಿದ್ದೇವೆ. ಈ ವಿಶ್ವಕಪ್‌ ವೇಳೆ ನಮಗೆ ಬೆಂಬಲ ನೀಡಿದ ಅಭಿಮಾನಿಗಳಿಗೆ ಮತ್ತು ಬೆಂಬಲ ಸಿಬ್ಬಂದಿಗೆ ಧನ್ಯವಾದಗಳು ಎಂದು ಹಾರ್ದಿಕ್‌ ಪಾಂಡ್ಯ ಟ್ವೀಟ್‌ ಮಾಡಿದ್ದಾರೆ. ಹಾರ್ದಿಕ್‌ ಪಾಂಡ್ಯ ಅವರ ಬಿರುಸಿನ ಆಟದಿಂದಾಗಿ ಭಾರತ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next