Advertisement

ದೇಗುಲದಲ್ಲಿ ಕೂರೋದು ಹೇಗೆಂದು ರಾಹುಲ್‌ಗೆ ಗೊತ್ತಿಲ್ಲ

06:00 AM Nov 21, 2017 | Harsha Rao |

ಲಕ್ನೋ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ದೇವಾಲಯಗಳ ಭೇಟಿಯನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಟೀಕಿಸಿದ್ದಾರೆ. “ದೇವಾಲಯ ದಲ್ಲಿ ಹೇಗೆ ಕುಳಿತುಕೊಳ್ಳ ಬೇಕು ಎಂಬುದೇ ರಾಹುಲ್‌ಗಾಂಧಿಗೆ ಗೊತ್ತಿಲ್ಲ.

Advertisement

ವಾರಾಣಸಿಯ ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದಾಗ, ರಾಹುಲ್‌ ನಮಾಜ್‌ಗೆ ಕುಳಿತಂತೆ ಕುಳಿತಿದ್ದರು. ಕೊನೆಗೆ, ಅಲ್ಲಿನ ಅರ್ಚಕರು, ಇದು ಮಸೀದಿ ಅಲ್ಲ, ದೇವಸ್ಥಾನ ಎಂದು ಹೇಳಬೇಕಾಯಿತು’ ಎಂದು ಯೋಗಿ ಕುಟುಕಿದ್ದಾರೆ. ರಾಮ, ಕೃಷ್ಣ ಕಾಲ್ಪನಿಕ ಎಂದು ಯುಪಿಎ ಸರಕಾರ ಹೇಳುತ್ತಿತ್ತು. ಹಾಗಿದ್ದರೆ, ರಾಹುಲ್‌ ಈಗ ದೇವಾಲಯಗಳನ್ನು ಸುತ್ತುತ್ತಿರುವುದೇಕೆ ಎಂದೂ ಯೋಗಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next