Advertisement

ರೈತರಿಗೆ ರಾಹುಲ್‌ ಆಶ್ವಾಸನೆ

06:00 AM Dec 24, 2018 | |

ಹೊಸದಿಲ್ಲಿ: ರೈತರ ಭವಿಷ್ಯವನ್ನು ಹಸನಾಗಿಸುವುದಕ್ಕಾಗಿ ತಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನೂ ಮಾಡುವುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ರೈತರಿಗೆ ಆಶ್ವಾಸನೆ ನೀಡಿದ್ದಾರೆ. 

Advertisement

ರಾಷ್ಟ್ರೀಯ ರೈತರ ದಿನಾಚರಣೆಯ (ಕಿಸಾನ್‌ ದಿವಸ್‌) ಹಿನ್ನೆಲೆಯಲ್ಲಿ ಭಾನುವಾರ ಟ್ವೀಟ್‌ ಮಾಡಿರುವ ಅವರು, “”ನಾನು ನೀಡಿರುವ ಈ ಆಶ್ವಾಸನೆ ಕೇವಲ ಆಶ್ವಾಸನೆಯಲ್ಲ. ನಿಮ್ಮಿಂದಾಗಿಯೇ ನಾವಿದ್ದೇವೆ. ನಿಮಗೆ ಅನಂತ ಧನ್ಯವಾದಗಳು” ಎಂದಿದ್ದಾರೆ. ಭಾರತದ ಐದನೇ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರ ಜನ್ಮದಿನವನ್ನು ರೈತರ ದಿನವನ್ನಾಗಿ ರಾಷ್ಟ್ರವ್ಯಾಪಿ ಆಚರಿಸಲಾಗುತ್ತದೆ.
 

Advertisement

Udayavani is now on Telegram. Click here to join our channel and stay updated with the latest news.

Next