Advertisement

ನನ್ನನ್ನು ಕಳಿಸಿಕೊಟ್ಟು ಅವನನ್ನು ವಾಪಸ್‌ ಕರೆಸಿಕೊಳ್ಳಿ : ರಾಘಣ್ಣ

08:14 AM Nov 17, 2021 | Team Udayavani |

ಇಪ್ಪತ್ತು ದಿನಗಳಿಂದ ಅವನಿಲ್ಲ ಅನ್ನೋದು ಅರಗಿಸಿಕೊಳ್ಳಲಾಗುತ್ತಿಲ್ಲ. “ರಾಜಕುಮಾರ’ ಸಿನಿಮಾದ ವೇದಿಕೆಯಲ್ಲಿ ನನ್ನ ಆಯಸ್ಸು ನಿನಗೆ ಕೊಡ್ತೀನಿ ಅಂದಿದ್ದ. ಆದ್ರೆ ಈಗ ಅವನೇ ತನ್ನ ಆಯಸ್ಸನ ನನಗೆ ಕೊಟ್ಟು ಹೋಗಿದ್ದಾನೆ ಎಂದು ಪುನೀತ್ ನಮನ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್ ಕಣ್ಣೀರು ಹಾಕಿದರು.

Advertisement

ಪುನೀತ್‌ ಅವರನ್ನ ಹೂತಿಲ್ಲ. ಅವನನ್ನು ಬಿತ್ತಿದ್ದೀವಿ. ಎಲ್ಲರಲ್ಲೂ ಅವನು ಇದ್ದಾನೆ. ತಮ್ಮನಾಗಿ ಬಂದವನು ತಂದೆಯಾಗಿ ಹೋದ. ನೀವೆಲ್ಲರೂ ಸೇರಿ ನನಗೊಂದು ಸಹಾಯ ಮಾಡಿ. ನನ್ನನ್ನು ಕಳಿಸಿಕೊಟ್ಟು ಅವನನ್ನು ವಾಪಸ್‌ ಕರೆಸಿಕೊಳ್ಳಿ…

ಹೇಗೆ ಬದುಕಬೇಕು ಎಂಬುದನ್ನು ನನಗೂ ಮತ್ತು ಶಿವಣ್ಣನಿಗೂ ತಿಳಿಸಿಕೊಟ್ಟು ಹೋದ. ದಯವಿಟ್ಟು ಬಂದುಬಿಡು ಕಂದಾ. ಇಷ್ಟು ದಿನ ಈ ನೋವನ್ನು ತಡೆದುಕೊಂದ್ದಾರೆ. ನಿನ್ನ ಜಾಗಕ್ಕೆ ನಾನು ಬರುತ್ತೇನೆ. ನಾನು ಅತ್ತರೆ ಪುನೀತ್‌ ಪತ್ನಿ ಮತ್ತು ಮಕ್ಕಳು ನೊಂದುಕೊಳ್ಳುತ್ತಾರೆ ಅಂತ ಸುಮ್ಮನಿದ್ದೆ. ಆದರೆ ಇಂದು ತಡೆದುಕೊಳ್ಳೋಕೆ ಆಗಲಿಲ್ಲ.

ಅತ್ತು ಹಗುರಾಗುತ್ತೇನೆ. ಈ ನೋವು ಮರೆಯುವ ಶಕ್ತಿ ಕೊಡು ಅಂತ ದೇವರಲ್ಲಿ ಕೇಳಲ್ಲ. ಈ ನೋವಿನ ಜೊತೆಗೆ ಬದುಕುವ ಶಕ್ತಿ ಕೊಡು ಅಂತ ಕೇಳುತ್ತೇನೆ’ ಎನ್ನುತ್ತಾ ರಾಘವೇಂದ್ರ ರಾಜ್ ಕುಮಾರ್ ಅತ್ತರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next