Advertisement

ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

10:42 AM Jan 10, 2018 | |

ಕನ್ನಡ ಚಿತ್ರರಂಗದ ಪ್ರಚಾರಕರ್ತರಾಗಿದ್ದ  ದಿವಂಗತ ಡಿ.ವಿ ಸುಧೀಂದ್ರ ಅವರು ಆರಂಭಿಸಿರುವ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಇದೀಗ 41ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಎಂದಿನಂತೆ ಈ ಬಾರಿಯೂ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರದಾನ ಸಮಾರಂಭ ಕೂಡಾ ನಡೆಯಲಿದ್ದು, ಜನವರಿ 25ರಂದು ಸಂಜೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

Advertisement

ಕನ್ನಡ ಚಿತ್ರರಂಗದ ಪ್ರಮುಖ ಗಣ್ಯರು ಈ ಸಮಾರಂಭದ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಸ್ಥೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ, ನಿರ್ಮಾಪಕರು ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠವನ್ನು ಸಂಸ್ಥೆ ಆರಂಭಿಸಿತ್ತು.

ಈ ಬಾರಿ 17ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಂದು ನಿಂತಿದೆ. ಕೇವಲ ಎರಡು ಪ್ರಶಸ್ತಿಗಳ ಮೂಲಕ ಆರಂಭವಾದ ಈ ಕಾರ್ಯ ಈಗ 11 ಪ್ರಶಸ್ತಿಗಳಿಗೆ ವಿಸ್ತಾರವಾಗಿದೆ. ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ನಿರ್ದೇಶಕರು, ನಿರ್ಮಾಪಕರು ಮತ್ತು ಪತ್ರಕರ್ತರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಪ್ರಶಸ್ತಿ ವಿವರ:
-ಹಿರಿಯ ನಿರ್ಮಾಪಕ ಕೆ.ಸಿ.ಎನ್‌ ವೇಣುಗೋಪಾಲ್‌ (ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)
-ಹಿರಿಯ ಪತ್ರಕರ್ತ ಕೃಷ್ಣರಾವ್‌ (ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)
-ಹಿನ್ನೆಲೆ ಗಾಯಕಿ ನಂದಿತ (ಡಾ. ರಾಜ್‌ಕುಮಾರ್‌ ಪ್ರಶಸ್ತಿ)
-ಎಸ್‌. ನಾರಾಯಣ್‌ (“ಯಜಮಾನ’ ಚಿತ್ರದ ಖ್ಯಾತಿ ಆರ್‌.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ )
-ಸುಂದರಶ್ರೀ (ಜಯಮಾಲ ಎಚ್‌.ಎಂ.ರಾಮಚಂದ್ರ ಪ್ರಶಸ್ತಿ) 
-ಬಾಪು ಪದ್ಮನಾಭ (ಎಂ.ಎಸ್‌.ರಾಮಯ್ಯ ಮೀಡಿಯಾ ಅಂಡ್‌ ಎಂಟರ್‌ಟೈನ್‌ಮೆಂಟ್‌ ಪ್ರ„.ಲಿ ಪ್ರಶಸ್ತಿ)
-“ರಾಜಕುಮಾರ’ ಚಿತ್ರದ ಕಥೆ-ಚಿತ್ರಕಥೆಗಾಗಿ ಸಂತೋಷ್‌ ಆನಂದರಾಮ್‌ (ನಿರ್ದೇಶಕ-ನಿರ್ಮಾಪಕ ಕೆ.ವಿ.ಜಯರಾಂ ಪ್ರಶಸ್ತಿ)
-“ಒಂದು ಮೊಟ್ಟೆಯ ಕಥೆ’ ಚಿತ್ರದ ಸಂಭಾಷಣೆಗಾಗಿ ರಾಜೇಶ್‌ ಬಿ ಶೆಟ್ಟಿ  (ಚಿತ್ರ ಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ )
-“ಮಫ್ತಿ’ ಚಿತ್ರದ ನಿರ್ದೇಶನಕ್ಕಾಗಿ ನರ್ತನ್‌ (ನಿರ್ದೇಶಕ ಬಿ. ಸುರೇಶ ಪ್ರಶಸ್ತಿ)
“ಚೌಕ’ ಚಿತ್ರದ “ಅಪ್ಪಾ ಐ ಲವ್‌ ಯು ಅಪ್ಪಾ …’ ಗೀತರಚನೆಗಾಗಿ ವಿ. ನಾಗೇಂದ್ರಪ್ರಸಾದ್‌ (ಹಿರಿಯ ಪತ್ರಕರ್ತರಾದ ಶ್ರೀಪಿ.ಜಿ.ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ)
-ಮನದೀಪರಾಯ್‌ (ಕಿಚ್ಚ ಕ್ರಿಯೇಷನ್ಸ್‌ ಪ್ರಶಸ್ತಿ) 

Advertisement

Udayavani is now on Telegram. Click here to join our channel and stay updated with the latest news.

Next