Advertisement

ರಫೇಲ್‌ ಬಗ್ಗೆ ಸಂಸತ್ತಿನಲ್ಲಿ ನಿರ್ಧಾರ : ಬಿಜೆಪಿಗೆ ಶಿವ ಸೇನೆ ಟಾಂಗ್

03:08 PM Dec 14, 2018 | Team Udayavani |

ಹೊಸದಿಲ್ಲಿ : ‘ರಫೇಲ್‌ ಡೀಲ್‌ ವಿಷಯವನ್ನು ಸಂಸತ್ತಿನಲ್ಲಿ ನಿರ್ಧರಿಸಲಾಗುವುದು, ಸುಪ್ರೀಂ ಕೋರ್ಟಿನಲ್ಲಿ ಅಲ್ಲ’ ಎಂದು ಶಿವ ಸೇನೆ ತನ್ನದೇ ಮಿತ್ರ ಪಕ್ಷ ಬಿಜೆಪಿಗೆ ಟಾಂಗ್‌ ನೀಡಿದೆ. 

Advertisement

‘ರಫೇಲ್‌ ಫೈಟರ್‌ ಜೆಟ್‌ ವಿಮಾನಗಳ ದರ ನಿರ್ಧರಿಸುವ ಕೆಲಸ ತನ್ನದಲ್ಲ ಎಂದು ಸುಪ್ರೀಂ ಕೋರ್ಟ್‌ ತನ್ನ ಇಂದಿನ ತೀರ್ಪಿನನಲ್ಲಿ ಹೇಳಿದೆ. ಅದೇ ರೀತಿ  ರಾಮ ಮಂದಿರ ವಿಷಯವನ್ನು ನಿರ್ಧರಿಸುವುದು ಕೂಡ ಸುಪ್ರೀಂ ಕೋರ್ಟಿನ ಕೆಲಸ ಅಲ್ಲ’ ಎಂದು ಶಿವ ಸೇನೆ ನಾಯಕ ಸಂಜಯ್‌ ರಾವುತ್‌ ಹೇಳಿದ್ದಾರೆ. 

‘ರಫೇಲ್‌ ಡೀಲ್‌ನಲ್ಲಿ ಅಕ್ರಮ ಆಗಿಲ್ಲ  ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ. ಹಾಗೆಯೇ ರಫೇಲ್‌ ಡೀಲ್‌ ನಿರ್ಧಾರ ಪ್ರಕ್ರಿಯೆಯಲ್ಲಿ ಯಾವುದೇ ಸಂದೇಹಕ್ಕೆ ಕಾರಣವಿಲ್ಲ ಎಂದು ಹೇಳಿದೆ. ಹಾಗಿದ್ದರೂ ರಫೇಲ್‌ ಡೀಲ್‌ ವಿಚಾರವನ್ನು ಸಂಸತ್ತಿನಲ್ಲಿ ನಿರ್ಧರಿಸಬೇಕೇ ವಿನಾ ಅದು ಸುಪ್ರೀಂ ಕೋರ್ಟ್‌ ನ ಕೆಲಸವಾಗದು’ ಎಂದು ರಾವುತ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next