Advertisement

Brahmavara ಕುದುರೆಗಳ “ರೇಸ್‌’ಗೆ ಗುಂಡ್ಮಿಯಲ್ಲಿ ತಡೆ!

01:02 AM Mar 05, 2024 | Team Udayavani |

ಕೋಟ: ಬ್ರಹ್ಮಾವರ ಬಳಿ ಆರೂರಿನ ಫಾರ್ಮ್ ವೊಂದರಿಂದ ತಪ್ಪಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಮೂಲಕ ಹತ್ತಾರು ಕಿ.ಮೀ. ಓಡಿದ 3 ಕುದುರೆಗಳನ್ನು ಕೊನೆಗೂ ಗುಂಡ್ಮಿಯ ಟೋಲ್‌ಗೇಟ್‌ ಬಳಿ ಹಿಡಿದು ಫಾರ್ಮ್ ನ ಮಾಲಕರಿಗೆ ಒಪ್ಪಿಸಲಾಯಿತು.

Advertisement

5 ಕುದುರೆಗಳು ಮಾ. 3ರಂದು ತಪ್ಪಿಸಿಕೊಂಡಿದ್ದು 2 ಸಿಕ್ಕಿದ್ದವು. ಉಳಿ ದವು ಕುಂದಾಪುರದ ಕಡೆ ಓಡು ತ್ತಿದ್ದವು. ಬ್ರಹ್ಮಾವರ ಭಾಗದವರು ಇವುಗಳ ಓಟದ ದೃಶ್ಯವನ್ನು ಸೆರೆ ಹಿಡಿ ದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

ಕುದುರೆಗಳು ಗುಂಡ್ಮಿ ತಲುಪುತ್ತಿದ್ದಂತೆ ಶಶಿ ಪಾಂಡೇ ಶ್ವರ ಎನ್ನುವವರು ಸ್ಥಳೀಯರ ಸಹಕಾ ರದೊಂದಿಗೆ ತಡೆದರು. ಅನಂತರ ಫಾರ್ಮ್ ನ ಕೆಲಸಗಾರರು ಕರೆದೊ ಯ್ದಿದ್ದಾರೆ. ಇವು ರೇಸ್‌ ಕುದುರೆಗಳು ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next