Advertisement

ರಬಕವಿ-ಬನಹಟ್ಟಿ: ಚಿಮ್ಮಡ ಗ್ರಾಮದ ರೈತ ಅತ್ಮಹತ್ಯೆ

09:23 PM Jul 22, 2022 | Team Udayavani |

ರಬಕವಿ-ಬನಹಟ್ಟಿ: ತಾಲ್ಲೂಕಿನ ಚಿಮ್ಮಡ ಗ್ರಾಮದ ರೈತ ಹನಮಂತ ಶಿಡ್ಲವ್ವಗೋಳ(57) ಗುರುವಾರ ಬೆಳಗಿನ ಜಾವ ಗ್ರಾಮದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ಮರದ ಟೊಂಗೆಗೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ರೈತ ಶಿಡ್ಲವ್ವಗೋಳ ರಬಕವಿಯ ಎಸ್ಬಿಐ ಮತ್ತು ಗ್ರಾಮದ ಪಿಕೆಪಿಎಸ್ ಬ್ಯಾಂಕ್ನಲ್ಲಿ ಹಾಗೂ ಇನ್ನಿತರರಿಂದ ಕೈಗಡ ಸಾಲವನ್ನು ಮಗನ ಆರೋಗ್ಯ ಸಲುವಾಗಿ ಮತ್ತು ಬೆಳೆ ಸಾಲವನ್ನು ಮಾಡಿದ್ದು, ಸರಿಯಾಗಿ ಬೆಳೆ ಬಾರದ ಕಾರಣ ಸಾಲ ಹೇಗೆ ತೀರಿಸುವುದು ಅಂತಾ ತಿಳಿಯದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಮೃತಳ ಪತ್ನಿ ಕಸ್ತೂರಿ ಶಿಡ್ಲವ್ವಗೋಳ ದೂರ ದಾಖಲಿಸಿದ್ದಾರೆ. ಸ್ಥಳೀಯ ಕ್ರೈಂ ಪಿಎಸ್‌ಐ ಪಿ.ಎಚ್.ಪೂಜಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಐ.ಎಂ.ಮಠಪತಿ ಮತ್ತು ಪಿಎಸ್ ಐ ರಾಕೇಶ ಬಗಲಿ ಮುಂದಿನ ತನಿಖೆಯನ್ನು ನಡೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next