Advertisement

ರಬಕವಿ-ಬನಹಟ್ಟಿ:  ರೈತ ವಿಷ ಸೇವಿಸಿ ಆತ್ಮಹತ್ಯೆ

09:44 AM Nov 22, 2021 | Team Udayavani |

ರಬಕವಿ-ಬನಹಟ್ಟಿ: ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ನಡೆದಿದೆ.

Advertisement

ಲಕ್ಷ್ಮಣ ತಿಪ್ಪಣ್ಣ ಬರಗಲ (55) ಮೃತ  ವ್ಯಕ್ತಿಯಾಗಿದ್ದು, ಎರಗಟ್ಟಿ ಗ್ರಾಮದಲ್ಲಿ ಒಂದು ಎಕರೆ ಜಮೀನು ಇದ್ದು ಸದರಿ ಜಮೀನಿನ ಮೇಲೆ ಮಾಡಿ ಗ್ರಾಮದ ಪಿಕೆಪಿಎಸ್ ನಲ್ಲಿ ₹.54,000 ಮತ್ತು ರಬಕವಿಯ ಕೆನರಾ ಬ್ಯಾಂಕ್ ನಲ್ಲಿ ₹.1,10,000 ಬೆಳೆಸಾಲ ಮಾಡಿದ್ದರಿಂದ ಈ ಸಾಲವನ್ನು ತೀರಿಸಲಾಗದೆ ಮನನೊಂದು  ಬೆಳೆಗೆ  ಹೊಡೆಯುವ ವಿಷಕಾರಿ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ನಿರಂತರ ಮಳೆ: ಕೊಚ್ಚಿ ಹೋದ ಸೇತುವೆ, ಸಂಕಷ್ಟದಲ್ಲಿ ಹಲವು ಗ್ರಾಮದ ಜನತೆ

ಅಸ್ವಸ್ಥಗೊಂಡ ರೈತನನ್ನು ರಾಂಪುರದ  ಡಾ. ಮಾಳಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ರವಿವಾರ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next