Advertisement

ಶ್ರೀರಾಮನ ಮೊಮ್ಮಕ್ಕಳೆಂದು ಹೇಳಿಕೊಳ್ಳಲು ನಾಚಿಕೆಯಾಗಲ್ವಾ: BJP ವಿರುದ್ಧ ಧ್ರುವನಾರಾಯಣ ಕಿಡಿ

03:05 PM Dec 01, 2021 | Team Udayavani |

ಚಿಕ್ಕಮಗಳೂರು: ನಾವು ಶ್ರೀರಾಮಚಂದ್ರನ ಮೊಮ್ಮಕ್ಕಳು ಎಂದು ಹೇಳಿಕೊಳ್ಳಲು ನಾಚಿಕೆಯಾಗಲ್ವಾ? ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡಲು ನೈತಿಕತೆ ಏನಿದೆ ಎಂದು ಬಿಜೆಪಿ ವಿರುದ್ಧ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಧ್ರುವನಾರಾಯಣ್ ವಾಗ್ದಾಳಿ ನಡೆಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿ ಗೆದ್ದಾಗ ಮೂರು ಮುಖ್ಯಮಂತ್ರಿಯಾದರು, ಮೂರು ಪಕ್ಷಗಳಾಗಿ ವಿಭಜನೆಯಾಯ್ತು. ಈ ಮುಖ್ಯಮಂತ್ರಿಯೂ ಬದಲಾಗುತ್ತಾರೆಂಬ ಮುನ್ಸೂಚನೆಯನ್ನು ಈಶ್ವರಪ್ಪ ಹೇಳಿದ್ದಾರೆ. ಇದು ಈಶ್ವರಪ್ಪ ಬಾಯಲ್ಲಿ ಬಂದ ಮಾತಲ್ಲ, ವರಿಷ್ಠರ ಬಾಯಿಂದ ಬಂದಿರುವ ಮಾತು. ಕಟೀಲ್, ಈಶ್ವರಪ್ಪ, ಸಿ.ಟಿ.ರವಿ ಮೇಲಿಂದ ಬಂದ ಮಾತನ್ನು ಹೇಳುತ್ತಾರೆ ಎಂದರು.

ಇದನ್ನೂ ಓದಿ:ಬೆಳಗಾವಿ ಅಧಿವೇಶನಕ್ಕೆ ಸಕಲ ಸಿದ್ದತೆ: ಪರಿಶೀಲನೆ ನಡೆಸಿದ ಅಧಿಕಾರಿಗಳು

ಬಿಜೆಪಿಯಲ್ಲಿ ಎರಡನೇ ಮುಖ್ಯಮಂತ್ರಿಯೂ ಬದಲಾವಣೆ ಆಗುತ್ತಾರೆ. ಈಶ್ವರಪ್ಪ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ. ಈಶ್ವರಪ್ಪನವರೇ ವರ್ಷವಾದರೂ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಯಾಕೆ ಮಾಡಿಲ್ಲ, ಧೈರ್ಯ ಇಲ್ಲವೇ ಎಂದು ಧ್ರುವನಾರಾಯಣ್ ಛೇಡಿಸಿದರು

Advertisement

Udayavani is now on Telegram. Click here to join our channel and stay updated with the latest news.

Next