Advertisement

ಭಾರತದ ಎಲ್ಲ ಬ್ರಾಹ್ಮಣರು ಒಂದೇ..; ಕುಮಾರಸ್ವಾಮಿ ಹೇಳಿಕೆಗೆ ಅಶೋಕ್ ತಿರುಗೇಟು

05:16 PM Feb 07, 2023 | Team Udayavani |

ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಟೀಕೆ ಮಾಡುವಾಗ ಬ್ರಾಹ್ಮಣರ ವಿರುದ್ಧ ಮಾತನಾಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಎಚ್ ಡಿ ಕುಮಾರಸ್ವಾಮಿಯವರೇ ಭಾರತದ ಎಲ್ಲ ಬ್ರಾಹ್ಮಣರು ಒಂದೇ. ಅವರು ಬ್ರಾಹ್ಮಣರು ಅಷ್ಟೇ. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕದ ಬ್ರಾಹ್ಮಣರು ಎಂದು ವಿಂಗಡಣೆ ಮಾಡುತ್ತ, ನೀವು ಬ್ರಿಟಿಷರ ಹಾಗೆ ಒಡೆದು ಆಳುವ ನೀತಿ ಅನುಸರಿಸುತ್ತಿದ್ದೀರಿ ಎಂದಿದ್ದಾರೆ.

ಇದನ್ನೂ ಓದಿ:ಮೊದಲ ಟೆಸ್ಟ್ ಗೂ ಮೊದಲು ಆಸೀಸ್ ಗೆ ಆಘಾತ, ಇನ್ನೂ ಗುಣಮುಖರಾಗಿಲ್ಲ ಆಲ್ ರೌಂಡರ್

ರಾಷ್ಟ್ರಕ್ಕೆ, ರಾಜ್ಯಕ್ಕೆ ಎಲ್ಲರಂತೆ ಬ್ರಾಹ್ಮಣ ಸಮಾಜದ ಕೊಡುಗೆಯು ಸಾಕಷ್ಟಿದೆ. ಸ್ವಭಾವತಃ ಸಾಧುಗಳಾದ ಬ್ರಾಹ್ಮಣರ ಮೇಲೆ ಮಾತನಾಡಿ, ಆ ಸಮಾಜಕ್ಕೆ ನೋವುಂಟುಮಾಡಿದ್ದಕ್ಕಾಗಿ ನೀವು ತಕ್ಷಣ ಕ್ಷಮೆ ಕೇಳಲೇಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next