Advertisement

Ramanagara; ಲಾರಿ ವಿಚಾರದಲ್ಲಿ ಸಂಬಂಧಿಕರ ಗಲಾಟೆ: ಬಿಡಿಸಲು ಬಂದಾತ ಹೆಣವಾದ!

02:36 PM May 26, 2023 | Team Udayavani |

ರಾಮನಗರ: ಲಾರಿ ವ್ಯವಹಾರದ ವಿಚಾರಕ್ಕೆ ಸಂಬಂಧಿಕರ ನಡುವೆ ಗಲಾಟೆ ನಡೆದು, ಗಲಾಟೆ ಬಿಡಿಸಲು ಬಂದ ವ್ಯಕ್ತಿ ಕೊಲೆಯಾದ ಘಟನೆ ರಾಮನಗರ ತಾಲೂಕಿನ ಹುಚ್ಚಮ್ಮನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

Advertisement

ಮದ್ದೂರು ನಿವಾಸಿ ಮಂಜು (28) ಮೃತ ದುರ್ದೈವಿ. ಲಾರಿ ಮಾಲಿಕ ರಘು ಹಾಗೂ ಸಂಬಂಧಿ ತಾಲೂಕಿನ ಬೆನ್ನಳಿ ಗ್ರಾಮದ ಮಂಜುನಾಥ್ ನಡುವೆ ಗಲಾಟೆ ನಡೆದಿದೆ. ಈ ವೇಳೆ ಲಾರಿ ಮಾಲಿಕ ರಘು ಜೊತೆ ಮಧ್ಯವರ್ತಿಯಾಗಿ ಬಂದಿದ್ದ ಮಂಜು ಮೇಲೆ ಹಲ್ಲೆ ನಡೆಸಲಾಗಿದೆ.

ಇದನ್ನೂ ಓದಿ:ವಿಕಾಸಸೌಧ ಉದ್ಘಾಟನೆಗೆ ರಾಜ್ಯಪಾಲರನ್ನು ಕರೆಯದ ಕಾಂಗ್ರೆಸ್ ಈಗ ರಾಜಕೀಯ ಮಾಡುತ್ತಿದೆ: HDK

ಗಂಭೀರವಾಗಿ ಗಾಯಗೊಂಡಿದ್ದ ಮಂಜು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ರಾಮನಗರ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next