Advertisement

ಪುತ್ತೂರು: 14 ಲಕ್ಷ ರೂ.ಗೂ ಅಧಿಕ ನಗದು ಕಳವು

12:47 AM Sep 17, 2022 | Team Udayavani |

ಪುತ್ತೂರು: ನಗರದ ಮುಖ್ಯರಸ್ತೆಯಲ್ಲಿರುವ ಪ್ರಕಾಶ್‌ ಫೂಟ್‌ವೇರ್‌ ಅಂಗಡಿಗೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ನಗದು ಕಳವು ಮಾಡಿದ ಘಟನೆ ಸೆ. 16ರಂದು ಬೆಳಕಿಗೆ ಬಂದಿದೆ.

Advertisement

ಪ್ರಕಾಶ್‌ ಫೂಟ್‌ವೇರ್‌ ಸಂಸ್ಥೆಯ ಮಾಲಕ ಮೊಹಮ್ಮದ್‌ ಶಮೀರ್‌ ಅವರು ಇನ್ನೋವಾ ಕಾರು ಖರೀದಿಗೆಂದು 15 ಲಕ್ಷ ರೂ. ಅನ್ನು ಡ್ರಾವರ್‌ನಲ್ಲಿ ತೆಗೆದಿರಿಸಿದ್ದರು. ಕಳ್ಳರು ಆ ಹಣವನ್ನು ಕಳವು ಮಾಡಿದ್ದಾರೆ.

ಪ್ರಕರಣದ ವಿವರ
ಪ್ರಕಾಶ್‌ ಫೂಟ್‌ವೇರ್‌ ಹೆಸರಿನ ಚಪ್ಪಲಿ ಅಂಗಡಿಯನ್ನು ಶಮೀರ್‌ ಹೊಂದಿದ್ದು, ಅಲ್ಲದೇ ಬೆಂಗಳೂರಿನಿಂದ ಹಳೆಯ ಕಾರುಗಳನ್ನು ಖರೀದಿಸಿ ತಂದು ಪುತ್ತೂರಿನಲ್ಲಿ ಮಾರಾಟ ಮಾಡುವ ವ್ಯವಹಾರವನ್ನು ಮಾಡುತ್ತಿದ್ದರು. ಕಾರು ವ್ಯವಹಾರದ ನಗದು ಹಣ 8 ಲಕ್ಷ ರೂ. ಮತ್ತು ಸ್ನೇಹಿತ ಸಿದ್ದಿಕ್‌ ನೀಡಿದ ನಗದು 7 ಲಕ್ಷ ರೂ. ಅನ್ನು ಅಂಗಡಿಯ ಕ್ಯಾಶ್‌ ಡ್ರಾವರ್‌ನ ಹಿಂಬದಿಯ ಮರದ ಬಾಕ್ಸ್‌ನಲ್ಲಿ ಇರಿಸಿದ್ದರು. ಶುಕ್ರವಾರ ಬೆಳಗ್ಗೆ ಅಂಗಡಿಯ ಸಿಬಂದಿ ಸ್ಥಳಕ್ಕೆ ಬಂದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.

ಅಂಗಡಿಯ ಹೆಂಚು ತೆಗೆದು ನುಗ್ಗಿದ ಕಳ್ಳರು ಅಂಗಡಿಯ ಡ್ರಾವರ್‌ನಲ್ಲಿದ್ದ 24,500 ರೂ., ಮರದ ಬಾಕ್ಸ್‌ನಲ್ಲಿಟ್ಟಿದ್ದ ರೂ 14,50,000 ರೂ. ನಗದು ಹಾಗೂ ಅಂಗಡಿಯ ಸಿಸಿ ಕೆಮರಾದ ಡಿವಿಆರ್‌ ಅನ್ನು ಕಳವುಗೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನ ಸ್ಥಳಕ್ಕೆ ಶ್ವಾನದಳ ಆಗಮಿಸಿದ್ದು ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆದಿದೆ. ಮುಖ್ಯರಸ್ತೆಯ ವಿವಿಧ ಸಿಸಿ ಕೆಮರಾಗಳ ದೃಶ್ಯಾವಳಿ ಪರಿಶೀಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next