Advertisement

ಪುತ್ತೂರು ಬಿರುವೆರ್‌ ಕುಡ್ಲ ಘಟಕ: ನೆರವು

01:10 PM May 12, 2018 | Team Udayavani |

ಈಶ್ವರಮಂಗಲ : ಕಾವು ಕೆರೆಮಾರು ಮೂಂಡೋಳೆ ನಿವಾಸಿ ಪದ್ಮಾವತಿ ಅವರ ವಾಸದ ಮನೆಯ ನಿರ್ಮಾಣಕ್ಕೆ ಸಹಾಯ ಹಸ್ತದ ಚೆಕ್‌ನ್ನು ಪುತ್ತೂರು ಬಿರುವೆರ್‌ ಕುಡ್ಲ ಘಟಕದ ವತಿಯಿಂದ ಹಸ್ತಾಂತರಿಸಲಾಯಿತು.

Advertisement

ಪುತ್ತೂರು ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಮೋನಪ್ಪ ಪೂಜಾರಿ ಕೆರೆಮಾರು ಮಾತನಾಡಿ, ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಯುವಕರು ಸ್ವಯಂ ಪ್ರೇರಣೆಯಿಂದ ಸಮಾಜಮುಖಿ  ಕೆಲಸದಲ್ಲಿ ತೊಡಗಿಕೊಂಡಿರುವುದು ಪರಸ್ಪರ ಸಹಕಾರ, ಸಹಬಾಳ್ವೆಯ ಸಂಕೇತ. ಸಮಾಜದ ಎಲ್ಲ ವರ್ಗದ ಜನರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಇಡೀ ಸಮಾಜಕ್ಕೆ ಬಿರುವೆರ್‌ ಕುಡ್ಲ ಸಂಘಟನೆ ಪ್ರೇರಣೆಯಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿರುವರೆ ಕುಡ್ಲ ಪುತ್ತೂರು ಘಟಕದ ಅಧ್ಯಕ್ಷ ಶೈಲೇಶ್‌ ಬಿರ್ವ ಅಗತ್ತಾಡಿ ವಹಿಸಿದರು. ಕುಂಬ್ರ ಮೂರ್ತೆದಾರರ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಶಾಂತಿವನ ಮಾತನಾಡಿ, ಸಂಘಟನೆ ರಾಜಕೀಯ ರಹಿತವಾಗಿ ಯುವಜನರು ಸಮಾಜಮುಖೀಯಾಗಿ ನೊಂದವರ ಬಾಳಿಗೆ ಬೆಳಕಾಗುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇದಕ್ಕೆ ಸಮಾಜದ ಜನರು ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.

ಕುಂಬ್ರ ಮೂರ್ತೆದಾರರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಕೊರಗಪ್ಪ ಪೂಜಾರಿ ಕೆರೆಮಾರು, ಸದಸ್ಯ ಲೋಹಿತ್‌ ಪೂಜಾರಿ, ಘಟಕದ ಉಪಾಧ್ಯಕ್ಷ ಡಾ| ಪ್ರವೀಣ್‌ ಸರ್ವೆದೋಳಗುತ್ತು, ಪ್ರಧಾನ ಕಾರ್ಯದರ್ಶಿ ತೇಜಸ್‌ ಬಿರ್ವಕೇಪುಲು, ಕೋಶಾಧಿಕಾರಿ ರಾಜೇಶ್‌ ಸದಸ್ಯರಾದ ಸುಧಾಕರ, ರಮೇಶ್‌ ಪೂಜಾರಿ, ಪ್ರಕಾಶ್‌ ಮಾಣಿಯಡ್ಕ, ಯತೀಶ್‌ ಪೂಜಾರಿ, ರಾಧಾಕೃಷ್ಣ ಪೂಜಾರಿ, ನಾರಾಯಣ ಪೂಜಾರಿ, ಅಣ್ಣು ಪೂಜಾರಿ, ಚಂದ್ರಶೇಖರ್‌ ಪೂಜಾರಿ, ರಾಜೇಶ್‌ ಪೂಜಾರಿ, ಪ್ರದೀಪ್‌ ಸುವರ್ಣ, ನಿತಿನ್‌ ಪೂಜಾರಿ, ಸುಜೀತ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next