Advertisement

ದೇಗುಲ ರಕ್ಷಣೆಗೆ ಆಸ್ಟ್ರೇಲಿಯ ಸಚಿವರಲ್ಲಿ ಪುತ್ತಿಗೆ ಶ್ರೀ ಆಗ್ರಹ

11:30 PM Jan 19, 2023 | Team Udayavani |

ಉಡುಪಿ: ಪರ್ಯಾಯ ಸಂಚಾರದಲ್ಲಿರುವ ಭಾವೀ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಆಸ್ಟ್ರೇಲಿಯದ ಅನಿವಾಸಿ ವಲಸೆ ಸಚಿವ ಆಂಡ್ರೂ ಗೈಲ್ಸ್‌ ಅವರು ತಮ್ಮ ಮನೆಗೆ ಬರಮಾಡಿಕೊಂಡು ಆಶೀರ್ವಾದ ಪಡೆದ‌ರು.

Advertisement

ಶ್ರೀಪಾದರು ಇತ್ತೀಚೆಗೆ ಹಿಂದೂ ದೇವಾಲಯಗಳನ್ನು ಗುರಿಯಾಗಿರಿಸಿ ಹಾನಿ ಮಾಡಿರುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಮತ್ತು ಭಾರತೀಯರಿಗೆ ವೀಸಾ ಕಾರ್ಯಗಳ ಶೀಘ್ರ ವಿಲೇವಾರಿ ಬಗ್ಗೆ ಶ್ರೀಪಾದರು ಸಚಿವರಲ್ಲಿ ಆಗ್ರಹಿಸಿದರು. ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿ, ಶ್ರೀಪಾದರ ಸಲಹೆಗಳನ್ನು ಪಡೆದುಕೊಂಡರು.

ಶ್ರೀಪಾದರು ಸಚಿವರಿಗೆ ವಿಶ್ವಭಾತೃತ್ವ ಸಾರುವ ಸ್ಮರಣಿಕೆ ನೀಡಿ ಆಶೀರ್ವದಿಸಿ, ಮುಂಬರುವ ಪರ್ಯಾಯಕ್ಕೆ ಸಚಿವರನ್ನು ಆಹ್ವಾನಿಸಿದರು. ಸಚಿವರು ಶ್ರೀಪಾದರ ಕೋಟಿಗೀತಾ ಲೇಖನ ಯಜ್ಞದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next