Advertisement

ಪುತ್ತಿಗೆ ಶ್ರೀಪಾದರಿಗೆ ಸಿಡ್ನಿಯಲ್ಲಿ ಗುರುವಂದನೆ

01:11 AM Jan 11, 2023 | Team Udayavani |

ಉಡುಪಿ: ಪರ್ಯಾಯ ವಿಶ್ವ ಸಂಚಾರದಲ್ಲಿರುವ ಭಾವೀ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದತೀರ್ಥ ಶ್ರೀಪಾದರು ಆಸ್ಟ್ರೇಲಿಯಾದ ಸಿಡ್ನಿ ಮಹಾನಗರಕ್ಕೆ ಆಗಮಿಸಿದಾಗ ಅಲ್ಲಿನ ಭಕ್ತರು ಹೆಲೆನ್ಸ್ ಬರ್ಗ್ ನ ಶ್ರೀ ಶ್ರೀನಿವಾಸ ದೇಗುಲದಲ್ಲಿ ತುಲಾಭಾರ ನೆರವೇರಿಸಿ ಗುರುವಂದನೆ ಸಮರ್ಪಿಸಿದರು.

Advertisement

ಉಡುಪಿಯ ತಮ್ಮ ಪರ್ಯಾಯಕ್ಕೆ ಬರುವಂತೆ ಭಕ್ತರನ್ನು ಆಹ್ವಾನಿಸಿದ ಶ್ರೀಪಾದರು ಆಶೀರ್ವಚನ ನೀಡಿದರು.

ಶ್ರೀಗಳನ್ನು ಸಾಲಂಕೃತ ಕುದುರೆ ಬಂಡಿಯಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ದೇಗುಲದಲ್ಲಿ ಸಂಸ್ಥಾನ ಪೂಜೆ, ಮುದ್ರಾಧಾರಣೆ, ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ಸಿಡ್ನಿಯ ತುಳು ಸಂಘದ ಪರವಾಗಿ ಪ್ರಸನ್ನ ಆಚಾರ್ಯ, ಪ್ರಧಾನ ಅರ್ಚಕ ನಿತೀಶ್‌ ಆಚಾರ್ಯ ಅವರು ಶ್ರೀಪಾದರಿಗೆ ಬೆಳ್ಳಿಯ ಕಿರೀಟ ಸಮರ್ಪಿಸಿದರು. ಖುಷಿ ದಕ್ಷಿಣಾಮೂರ್ತಿ ಅವರು ಮರಳಿನ ಮೂಲಕ ರಚಿಸಿದ ಶ್ರೀಪಾದರ ಚಿತ್ರವನ್ನು ಶ್ರೀಗಳಿಗೆ ಸಮರ್ಪಿಸಿದರು.

ಜಗನ್ನಾಥ್‌ ಪ್ರಸ್ತಾವನೆಗೈದರು. ಹಿರಿಯರಾದ ಶ್ರೀಧರ ಕುಂಶಿ ಸ್ವಾಗತಿಸಿ, ಶ್ರೀನಿವಾಸ ಜೋಶಿ ನಿರೂಪಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next