Advertisement

ನೋಟಲ್ಲಿ ಸಾವರ್ಕರ್‌ ಚಿತ್ರ ಹಾಕಲು ಆಗ್ರಹ

01:01 AM Feb 27, 2023 | Team Udayavani |

ಮುಂಬಯಿ: ನೋಟುಗಳಲ್ಲಿರುವ ಮಹಾತ್ಮಾ ಗಾಂಧಿ ಚಿತ್ರವನ್ನು ತೆಗೆದು, ಆ ಜಾಗಕ್ಕೆ ವೀರ ಸಾವರ್ಕರ್‌ ಅವರ ಚಿತ್ರವನ್ನು ಸೇರ್ಪಡೆಗೊಳಿಸಿ ನೋಟು ಮುದ್ರಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರವಿವಾರ ಕೇಂದ್ರ ಸರಕಾರಕ್ಕೆ ಆಗ್ರಹಿಸಿದೆ. ಈ ಮೂಲಕ ಸಾವರ್ಕರ್‌ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

Advertisement

ಭಾರತ ಸರಕಾರಕ್ಕೆ ಮಹಾಸಭಾ ಮುಕ್ತಪತ್ರ ವನ್ನು ಬರೆದಿದೆ. ಅದರಲ್ಲಿ ಗಾಂಧಿ ಚಿತ್ರದ ಬದಲಿಗೆ ಸಾವರ್ಕರ್‌ ಹಾಗೂ ಇನ್ನಿತರ ಸ್ವಾತಂತ್ರ್ಯ ಹೋರಾಟಗಾರರ ಚಿತ್ರವನ್ನು ಮುದ್ರಿಸುವಂತೆ ಕೇಳಿದೆ.

ಇದು ಸಾವರ್ಕರ್‌ ಅವರಿಗೆ ನೀಡುವ ನಿಜವಾದ ಗೌರವ ಎಂದು ನಮೂದಿಸಿದೆ. ಜತೆಗೆ ಸಂಸತ್‌ ಭವನದ ರಸ್ತೆಗೆ ಸಾವರ್ಕರ್‌ ಅವರ ಹೆಸರನ್ನಿಡು ವಂತೆಯೂ ಕೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next