Advertisement

ಪುಷ್ಪದಂತ ಸಾಗರಜೀ ನಾಳೆ ನಗರಕ್ಕೆ

10:26 AM Jun 24, 2017 | |

ಬೆಂಗಳೂರು: ಜೈನ ಗುರುಗಳಾದ ಆಚಾರ್ಯ ಶ್ರೀ 108 ಪುಷ್ಪದಂತ ಸಾಗರಜೀ ಮಹಾರಾಜರ ವರ್ಷದ ಚಾತುರ್ಮಾಸವನ್ನು ಕೆ.ಆರ್‌. ರಸ್ತೆಯ ಕರ್ನಾಟಕ ಜೈನ ಭವನದಲ್ಲಿ ಆಯೋಜಿಸಲಾಗಿದೆ. 

Advertisement

ಭಾನುವಾರದಂದು (ಜೂ.25) ರಂದು ಬೆಳಗ್ಗೆ 8.30 ಕ್ಕೆ ಶ್ರೀಗಳನ್ನು ಜಯನಗರದ ಸೌತ್‌ ಎಂಡ್‌ ವೃತ್ತದ ಚಕ್ರೇಶ್ವರಿ ಮಹಿಳಾ ಸಮಾಜದಿಂದ ಜೈನ್‌ ಭವನಕ್ಕೆ ಮೆರವಣಿಗೆ ಮೂಲಕ ಕರೆ ತರಲಾಗುವುದು. ಚಾತುರ್ಮಾಸ ಕಲಶ ಸ್ಥಾಪನೆಯು ಜುಲೈ 9 ರಂದು ಜೈನ ಭವನದಲ್ಲಿ ನಡೆಯಲಿದೆ.

ಅಕ್ಷೋಬರ್‌ ಅಂತ್ಯದ ವರೆಗೆ ಶ್ರೀಗಳು ಧರ್ಮ ಪ್ರಭಾವನೆ ಮಾಡಲಿದ್ದಾರೆ. ಚಾತುರ್ಮಾಸದಲ್ಲಿ 108 ಪ್ರಮುಖ ಸಾಗರ ಮುನಿ ಮಹಾರಾಜರು, 108 ಪೂಜ್ಯ ಸಾಗರ ಮುನಿಮಹಾರಾಜರು ಹಾಗೂ ಕ್ಷುಲ್ಲಕ ಶ್ರೀ 105 ಪುಕಾರ ಸಾಗರ ಮಹಾರಾಜರು ಆಗಮಿಸಲಿದ್ದಾರೆ ಎಂದು ತ್ಯಾಗಿಸೇವಾ ಸಮಿತಿ ಅಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next