Advertisement

ದೇವರಿದ್ದಾನೆ, ರಥೋತ್ಸವಕ್ಕೆ ಅವಕಾಶ ಕೊಡಬಹುದು: ಸಿಜೆಐ

07:10 AM Jul 07, 2021 | Team Udayavani |

ಹೊಸದಿಲ್ಲಿ/ಪುರಿ: ಈ ತಿಂಗಳ 12ರಂದು ನಡೆಯಲಿರುವ ಪುರಿ ಜಗನ್ನಾಥ ದೇಗುಲದ ರಥಯಾತ್ರೆಗೆ ಸೀಮಿತ ಜನರು ಭಾಗಿಯಾಗಬೇಕು ಎಂದು ಹೇಳಿರುವ ಒಡಿಶಾ ಸರಕಾರದ ನಿರ್ಧಾರಕ್ಕೆ ಮಧ್ಯಪ್ರವೇಶ ಮಾಡುವುದಿಲ್ಲ ಎಂದಿದೆ ಸುಪ್ರೀಂ ಕೋರ್ಟ್‌.

Advertisement

ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ನ್ಯಾಯಪೀಠ ಈ ಬಗ್ಗೆ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ಮಂಗಳ ವಾರ ನಡೆಸಿತು. ಕೇಂದ್ರಪಾರ ಮತ್ತು ಬರ್ಗಾಹ್‌ ಜಿಲ್ಲೆಗಳಲ್ಲಿ ಜಗನ್ನಾಥ ರಥಯಾತ್ರೆ ನಡೆಸ ಬೇಕು ಎಂದು ಅರ್ಜಿದಾರರ ಅರಿಕೆಯಾಗಿತ್ತು.

“ರಥಯಾತ್ರೆ ನಡೆಸುವ ಬಗ್ಗೆ ಸುಗಮವಾಗಿ ನಡೆಸುವ ಬಗ್ಗೆ ದೇವರು ಅವಕಾಶ ಕೊಡಲಿದ್ದಾನೆ ಎಂದು ನಂಬಿಕೊಳ್ಳೋಣ. ನಾನೂ ಪುರಿಗೆ ಪ್ರತೀ ವರ್ಷ ಹೋಗುತ್ತೇನೆ. ಸೋಂಕಿನ ಪರಿಸ್ಥಿತಿಯಿಂದ ಒಂದೂವರೆ ವರ್ಷಗಳಿಂದ ಅಲ್ಲಿಗೆ ಹೋಗಿಲ್ಲ. ನಾನು ಮನೆಯಲ್ಲೇ ಪೂಜೆ ಮಾಡು ತ್ತಿದ್ದೇನೆ. ಹೀಗಾಗಿ, ಪೂಜೆಯನ್ನು ಮನೆಯಲ್ಲಿಯೇ ಮಾಡಬಹುದು’ ಎಂದರು. ಸೀಮಿತ ಭಕ್ತರು ಇರಬೇಕು ಎಂದು ಒಡಿಶಾ ಸರಕಾರ ಸರಿಯಾಗಿ ನಿರ್ಧಾರ ಕೈಗೊಂಡಿದೆ. ಅದನ್ನು ಪ್ರಶ್ನಿಸುವುದಿಲ್ಲ ಎಂದರು ಮುಖ್ಯ ನ್ಯಾಯಮೂರ್ತಿ.

Advertisement

Udayavani is now on Telegram. Click here to join our channel and stay updated with the latest news.

Next