Advertisement

Odisha: ಪುರಿ ಕಾರಿಡಾರ್‌ ಉದ್ಘಾಟನೆಗೆ ರೆಡಿ

11:35 PM Jan 03, 2024 | Team Udayavani |

ಭುವನೇಶ್ವರ: ಅಯೋಧ್ಯೆಯಲ್ಲಿ ಜ. 22ರಂದು ರಾಮ ಮಂದಿರ ಲೋಕಾರ್ಪಣೆ­ಗೊಳ್ಳಲಿರುವಂತೆಯೇ ಅಷ್ಟೇ ಭವ್ಯವಾಗಿ ಪುರಿಯಲ್ಲಿ “ಜಗನ್ನಾಥ ಹೆರಿಟೇಜ್‌ ಕಾರಿಡಾರ್‌ ಯೋಜನೆ’ ಉದ್ಘಾಟನೆಗೆ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅಣಿಯಾಗಿದ್ದಾರೆ.

Advertisement

ಲೋಕಸಭೆ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಜಗನ್ನಾಥ ಮಂದಿರದ ಅಭಿವೃದ್ಧಿ ಯೋಜನೆಗಳ ಮೂಲಕ ಅದರ ಲಾಭ ಪಡೆಯಲು ಬಿಜೆಡಿ ಮುಂದಾಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಜ. 17ರಂದು ಜಗನ್ನಾಥ ಹೆರಿಟೇಜ್‌ ಕಾರಿಡಾರ್‌ ಲೋಕಾರ್ಪಣೆಯಾಗುತ್ತಿದೆ. ಜತೆಗೆ ಕೋಟ್ಯಂತರ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೂ ಸಿಎಂ ಚಾಲನೆ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next