Advertisement

ಕಾಶ್ಮೀರಿ ಪಂಡಿತರ ಪುನರ್ವಸತಿಯು ಕಾರ್ಯಾಂಗದ ಭಾಗ: ಸುಪ್ರೀಂ ಕೋರ್ಟ್‌

10:03 PM Sep 02, 2022 | Team Udayavani |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಮತ್ತು ಸಿಖ್ಖರ ಪುನರ್ವಸತಿ ಕಾರ್ಯವು ಸಂಪೂರ್ಣವಾಗಿ ಕಾರ್ಯಾಂಗದ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್‌ ಪ್ರತಿಪಾದಿಸಿದೆ.

Advertisement

ಈ ಸಂಬಂಧ ಅರ್ಜಿದಾರರು(ಎನ್‌ಜಿಒ) ಮೊದಲು ಕೇಂದ್ರ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತವನ್ನು ಸಂಪರ್ಕಿಸುವಂತೆ ಅದು ಸೂಚಿಸಿದೆ.

“ವಿ ದಿ ಸಿಟಿಜನ್ಸ್‌’ ಎನ್‌ಜಿಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, “ಇದು ಕಾರ್ಯಾಂಗದ ಭಾಗವಾಗಿದೆ. ಮೊದಲು ಸರ್ಕಾರಕ್ಕೆ ಮನವಿ ಸಲ್ಲಿಸಿ. ಇದರಲ್ಲಿ ನ್ಯಾಯಾಲಯ ಏಕೆ ಮಧ್ಯಸ್ಥಿಕೆ ವಹಿಸಬೇಕು,” ಎಂದು ಎನ್‌ಜಿಒ ಪರ ವಕೀಲರನ್ನು ಪ್ರಶ್ನಿಸಿತು.

ಅಲ್ಲದೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮುನ್ನ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತೇ ಎಂದು ಪ್ರಶ್ನಿಸಿತು. ಇದಕ್ಕೆ ಎನ್‌ಜಿಒ ಪರ ವಕೀಲರಿಂದ “ಇಲ್ಲ’ ಎಂಬ ಉತ್ತರ ಬಂದಿತು. ಹಾಗಾಗಿ ನ್ಯಾಯಪೀಠ ಈ ಮೇಲ್ಕಂಡ ಅಭಿಪ್ರಾಯ ವ್ಯಕ್ತಪಡಿಸಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next