Advertisement

ಪಾದರಕ್ಷೆ ಧರಿಸಿ ಗುರುದ್ವಾರ ಪ್ರವೇಶ: ಪಂಜಾಬ್ ನಲ್ಲಿ ವ್ಯಕ್ತಿಯ ಬಂಧನ

04:37 PM May 17, 2023 | Team Udayavani |

ಅಮೃತಸರ: ರಾಜಪುರ ಪಟ್ಟಣದ ಗುರುದ್ವಾರವೊಂದಕ್ಕೆ ಬೂಟುಗಳನ್ನು ಧರಿಸಿ ಯಾವುದೇ ರೀತಿಯಲ್ಲಿ ತಲೆ ಮುಚ್ಚಿಕೊಳ್ಳದೆ ಪ್ರವೇಶಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

Advertisement

ಗುರುದ್ವಾರ ಶ್ರೀ ಗುರು ಸಿಂಗ್ ಸಭಾದ ಸ್ವಯಂಸೇವಕರು ಸಾಹಿಲ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಸುದ್ದಿ ಹರಡುತ್ತಿದ್ದಂತೆ, ಹೆಚ್ಚಿನ ಸಂಖ್ಯೆಯ ಜನರು ಪೊಲೀಸ್ ಠಾಣೆ (ನಗರ) ರಾಜಪುರದ ಹೊರಗೆ ಜಮಾಯಿಸಿದರು.

ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಅಡಿಯಲ್ಲಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ರಾಜಪುರ ನಗರ ಇನ್ಸ್‌ಪೆಕ್ಟರ್ ರಾಜೇಶ್ ಮಲ್ಹೋತ್ರಾ ತಿಳಿಸಿದ್ದಾರೆ.

ಘಟನೆಯನ್ನು ದೃಢಪಡಿಸಿದ ರಾಜ್ಪುರದ ಗುರುದ್ವಾರ ಸಮಿತಿಯ ಅಧ್ಯಕ್ಷ ಅಬ್ರೀಂದರ್ ಸಿಂಗ್ ಕಾಂಗ್ ಅವರು ಘಟನೆಯನ್ನು ಪರಿಶೀಲಿಸುತ್ತಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಪರಿಗಣಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next