Advertisement

Punishment ಭರಚುಕ್ಕಿ ಜಲಪಾತಕ್ಕೆ ಇಳಿದ ವಿದ್ಯಾರ್ಥಿಗಳಿಗೆ 100 ಬಸ್ಕಿ ಶಿಕ್ಷೆ !

11:35 PM Jul 29, 2024 | Team Udayavani |

ಕೊಳ್ಳೇಗಾಲ: ನಿಯಮ ಮೀರಿ ರವಿವಾರ ಸಂಜೆ ಭರಚುಕ್ಕಿ ಜಲಪಾತದ ತಳ ಭಾಗಕ್ಕೆ ಇಳಿದು ಫೋಟೋ, ವೀಡಿಯೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಬೆಂಗಳೂರಿನ 15 ವಿದ್ಯಾರ್ಥಿಗಳನ್ನು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಎಸ್‌ಐ ಗಣೇಶ್‌ ಮೇಲಕ್ಕೆ ಕರೆಸಿ ಪ್ರತಿಯೊಬ್ಬರಿಗೂ 100 ಬಸ್ಕಿ ಹೊಡೆಯುವ ಶಿಕ್ಷೆ ನೀಡಿ ಮತ್ತೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿ ವಾಪಸ್‌ ಕಳುಹಿಸಿದ್ದಾರೆ.

Advertisement

ಕೆಆರ್‌ಎಸ್‌ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಕಾವೇರಿ ನದಿಗೆ ಬಿಟ್ಟಿರುವುದರಿಂದ ಭರಚುಕ್ಕಿ ಜಲಪಾತ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದೆ.

ಈ ಹಿನ್ನೆಲೆಯಲ್ಲಿ ಜಲಪಾತದ ಬಳಿ ತೆರಳದಂತೆ ಸೂಚನಾ ಫಲಕ ಹಾಕಲಾಗಿದ್ದರೂ, ಯುವಕರು ಸೆಲ್ಫಿ ಹುಚ್ಚಿಗಾಗಿ ಹತ್ತಿರಕ್ಕೆ ತೆರಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next