Advertisement

ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅಪ್ಪುಗೆ ಶ್ರದ್ಧಾಂಜಲಿ ; ನಾಳೆ 11ನೇ ದಿನದ ಕಾರ್ಯ

07:56 PM Nov 07, 2021 | Team Udayavani |

ಬೆಂಗಳೂರು: ಅಕಾಲಿಕವಾಗಿ ಹೃದಯಾಘಾತದಿಂದ ವಿಧಿವಶರಾದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಭಾನುವಾರ ರಾಜ್ಯಾದ್ಯಂತ 550 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ದೀಪ ನಮನ ಮತ್ತು ಮೌನಾಚರಣೆಯ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

Advertisement

ಹೆಚ್ಚಿನ ಚಿತ್ರ ಮಂದಿರಗಳಲ್ಲಿ ಮೌನಾಚರಣೆ ಮಾಡಿ, ಕ್ಯಾಂಡಲ್ , ದೀಪಗಳನ್ನು ಹಚ್ಚಿ ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಪುಟಾಣಿಗಳು, ಚಿತ್ರ ಪ್ರೇಮಿಗಳು ಸೇರಿ ಅಭಿಮಾನಿಗಳು ಈ ವೇಳೆ ಭಾವುಕರಾಗಿ ಕಣ್ಣೇರಿಟ್ಟರು.

ನಾಳೆ 11 ನೇ ದಿನದ ಕಾರ್ಯ
ನಾಳೆ ಪುನೀತ್ ಅವರ 11 ನೇ ದಿನದ ಕಾರ್ಯ ನಡೆಯಲಿದ್ದು, ಅಭಿಮಾನಿಗಳಿಗೆ ಬೆಳಗ್ಗೆ ಕಂಠೀರವ ಸ್ಟುಡಿಯೋ ಗೆ ಪ್ರವೇಶ ನೀಡಲಾಗುತ್ತಿಲ್ಲ. ಕುಟುಂಬ ಸದಸ್ಯರು ಕಾರ್ಯ ನಡೆಸಿ ಬಳಿಕ ಸದಾಶಿವ ನಗರದ ಮನೆಯಲ್ಲಿ ಕಾರ್ಯಗಳು ನಡೆಯಲಿವೆ. ಕಂಠೀರವ ಸ್ಟುಡಿಯೋ ಸುತ್ತ ಭದ್ರತೆ ಹೆಚ್ಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next