Advertisement

ಪುನೀತ್‌ ರಾಜಕುಮಾರ್‌ ರ ‘ಯುವರತ್ನ’ ಇಂದು ತೆರೆಗೆ

08:04 AM Apr 01, 2021 | Team Udayavani |

ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ’ ಚಿತ್ರ ಇಂದು (ಏ. 1) ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ತೆರೆಕಾಣುತ್ತಿದ್ದು, ಎರಡೂ ಭಾಷೆಗಳಲ್ಲೂ ಚಿತ್ರದ ಬಿಡುಗಡೆಗೆ ಭರ್ಜರಿ ತಯಾರಿ ನಡೆದಿದೆ. ಇಂದು ಮುಂಜಾನೆಯಿಂದಲೇ “ಯುವರತ್ನ’ ಚಿತ್ರದ ಪ್ರದರ್ಶನ ಆರಂಭವಾಗಲಿದ್ದು, ತಮ್ಮ ನೆಚ್ಚಿನ ನಟ ಚಿತ್ರವನ್ನು ಮೊದಲ ದಿನವೇ ಕಣ್ತುಂಬಿಕೊಳ್ಳಲು ಪವರ್‌ಸ್ಟಾರ್‌ ಫ್ಯಾನ್ಸ್‌ ಕೂಡ ಕಾತುರರಾಗಿದ್ದಾರೆ.

Advertisement

ಇನ್ನು “ಯುವರತ್ನ’ ಚಿತ್ರದಲ್ಲಿ ಪುನೀತ್‌ ರಾಜಕುಮಾರ್‌ಗೆ ಸಯೇಶಾ ಸೈಗಲ್‌ ಮೊದಲ ಬಾರಿಗೆ ನಾಯಕಿಯಾಗಿ ಜೋಡಿಯಾಗುತ್ತಿದ್ದಾರೆ. ಉಳಿದಂತೆ ಪ್ರಕಾಶ್‌ ರೈ, ಸಾಯಿಕುಮಾರ್‌, ಧನಂಜಯ್‌, ದಿಗಂತ್‌, ಸೋನು ಗೌಡ, ವಿಶಾಲ್‌ ಹೆಗ್ಡೆ, ಸಾಧುಕೋಕಿಲ, ರಂಗಾಯಣ ರಘು, ಅಚ್ಯುತ ಕುಮಾರ್‌, ಅವಿನಾಶ್‌, ಸುಧಾರಾಣಿ, ಪ್ರಕಾಶ್‌ ಬೆಳವಾಡಿ, ತಾರಕ್‌ ಪೊನ್ನಪ್ಪ, ರಾಜೇಶ್‌ ನಟರಂಗ, ಗುರುದತ್‌, ಕುರಿ ಪ್ರತಾಪ್‌, ಹನುಮಂತೇ ಗೌಡ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಹೊಂಬಾಳೆ ಫಿಲಂಸ್‌’ ಬ್ಯಾನರ್‌ನಲ್ಲಿ ವಿಜಯ್‌ ಕಿರಗಂದೂರು “ಯುವರತ್ನ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. “ಯುವರತ್ನ’ ಚಿತ್ರಕ್ಕೆ ಸಂತೋಷ್‌ ಆನಂದರಾಮ್‌ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಎಸ್‌. ತಮನ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ವೆಂಕಟೇಶ್‌ ಅಂಗುರಾಜ್‌ ಛಾಯಾಗ್ರಹಣ, ಜ್ಞಾನೇಶ್‌ ಬಿ. ಮಠದ್‌ ಸಂಕಲನವಿದೆ. ಶಿವಕುಮಾರ್‌ ಕಲಾ ನಿರ್ದೇಶನ, ಚಿನ್ನಿಪ್ರಕಾಶ್‌, ಜಾನಿ, ಸಿರೀಶ್‌, ಮೋಹನ್‌ ನೃತ್ಯ ನಿರ್ದೇಶನವಿದೆ. ಚಿತ್ರದ ಸಾಹಸ ದೃಶ್ಯಗಳಿಗೆ ರಾಮ್‌ ಲಕ್ಷ್ಮಣ್‌, ಅಂಬು ಅರಿವು, ವಿಜಯ…, ದಿಲೀಪ್‌ ಸುಬ್ರಹ್ಮಣ್ಯಂ ಸಾಹಸ ಸಂಯೋಜಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಹಾಡುಗಳು ಮತ್ತು ಟ್ರೇಲರ್‌ಗಳ ಮೂಲಕ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಜೋರಾಗಿ ಸದ್ದು ಮಾಡುತ್ತಿರುವ “ಯುವರತ್ನ’ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇನ್ನು ಚಿತ್ರತಂಡ ಕೂಡ ಭರ್ಜರಿಯಾಗಿ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದ್ದು, ರಾಜ್ಯದ ಉದ್ದಗಲ ಸಂಚಾರ ಮಾಡಿ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸವನ್ನು ಮಾಡಿದೆ. ಒಟ್ಟಾರೆ ರಿಲೀಸ್‌ಗೂ ಮೊದಲೇ ಸೌಂಡ್‌ ಮಾಡುತ್ತಿರುವ ಪುನೀತ್‌ ಅವರ ಪವರ್‌ ಪ್ಯಾಕ್‌ ಸಿನಿಮಾ “ಯುವರತ್ನ’ ಥಿಯೇಟರ್‌ನಲ್ಲಿ ಪ್ರೇಕ್ಷಕ ಪ್ರಭು ಗಳಿಗೆ ಹೇಗೆಲ್ಲಾ ಇಷ್ಟವಾಗುತ್ತದೆ ಅನ್ನೋ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next