Advertisement

ಶ್ರೀಗಂಧದಲ್ಲಿ ಡಾ. ಪುನೀತ್‌ ರಾಜ್‌ಕುಮಾರ್ ಪುತ್ಥಳಿ 

10:33 AM Jun 27, 2022 | Team Udayavani |

ಹುಣಸೂರು: ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಅಭಿಮಾನಿ ಶ್ರೀಗಂಧದಲ್ಲಿ ಪುತ್ಥಳಿ ಕೆತ್ತಿಸಿದ್ದು, ಪುನೀತ್ ಪತ್ನಿ ಅಶ್ವಿನಿಯವರಿಗೆ ಕೊಡುಗೆ ನೀಡಲು ಮುಂದಾಗಿದ್ದಾರೆ.

Advertisement

ಹುಣಸೂರು ನಗರದ ಯುವ ಕಾಂಗ್ರೆಸ್ ಅಧ್ಯಕ್ಷ ಅಪ್ಪು ಅಭಿಮಾನಿ ಸ್ವರೂಪ್ ಶಿವಯ್ಯ ಶ್ರೀಗಂಧದಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿ ಕೆತ್ತಿಸಿದ್ದು, ಇಂದು ಉಡುಗೊರೆ ನೀಡಲಿದ್ದಾರೆ.

ನಗರದ ಅಧಿದೇವತೆ ಶ್ರೀ ಮುತ್ತು ಮಾರಮ್ಮ ದೇವಾಲಯದಲ್ಲಿ ಗಣ್ಯರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಮಾತನಾಡಿದ ಅಪ್ಪು ಅಭಿಮಾನಿ ಸ್ವರೂಪ್ ಶಿವಯ್ಯ, ಪುತ್ಥಳಿಯನ್ನು ಮೈಸೂರಿನ ಕುಶಲಕರ್ಮಿಗಳಾದ ಅಶೋಕ್ ಮತ್ತು ರಂಜಿತ್ ಸುಮಾರು ನಾಲ್ಕು ತಿಂಗಳ ಕಾಲ ಕೆಲಸ ಮಾಡಿ ಆಕರ್ಷಕ ಪುತ್ಥಳಿ ನಿರ್ಮಿಸಿ ಕೊಟ್ಟಿದ್ದಾರೆ ಎಂದರು.

ಪುತ್ಥಳಿ ನಿರ್ಮಾಣಕ್ಕೆ ಸುಮಾರು 3 ಲಕ್ಷ ರೂ. ವೆಚ್ಚವಾಗಿದ್ದು. ಜೂ 27 ರ ಸೋಮವಾರ ಮದ್ಯಾಹ್ನ ಬೆಂಗಳೂರಿನ ವಜ್ರೇಶ್ವರಿ ಕಂಬೈನ್ಸ್ ಕಚೇರಿಯಲ್ಲಿ ಪುನೀತ್ ರಾಜ್ ಕುಮಾರ್ ರವರ ಪತ್ನಿ ಅಶ್ವಿನಿಯವರಿಗೆ ಹಸ್ತಾಂತರಿಸಲಾಗುವುದೆಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಎಚ್.ವೈ.ಮಹದೇವ್ ಸೇರಿದಂತೆ ಪುನೀತ್ ಅಭಿಮಾನಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next