Advertisement

ಡಿ. 18 ರಂದು ಪುನೀತ ನುಡಿ, ಗಾಯನ ನಮನ ಕಾರ್ಯಕ್ರಮ

07:01 PM Dec 14, 2021 | Team Udayavani |

ರಬಕವಿ-ಬನಹಟ್ಟಿ: ಇದೇ 18 ರಂದು ಸ್ಥಳೀಯ ಎಸ್‌ಆರ್‌ಎ ಕಾಲೇಜು ಮೈದಾನದಲ್ಲಿ ಅಖಿಲ ಕರ್ನಾಟಕ ಹವ್ಯಾಸಿ ಹಾಗೂ ಜಾನಪದ ಕಲಾವಿದರ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವದ ನಿಮಿತ್ತವಾಗಿ ಪುನೀತ ರಾಜಕುಮಾರ ನುಡಿ ಮತ್ತು ಗಾಯನ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ರಾಯಪ್ಪ ದಡ್ಡಿಮನಿ ತಿಳಿಸಿದರು.

Advertisement

ಅವರು ಮಂಗಳವಾರ ಸ್ಥಳೀಯ ಹಿರೇಮಠದಲ್ಲಿ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಚಲನಚಿತ್ರ ಖ್ಯಾತ ನಟಿ ಪ್ರೇಮಾ, ಜಾನಪದ ಕಲಾವಿದ ಮತ್ತು ಚಲನಚಿತ್ರ ನಟ ಗುರುರಾಜ ಹೊಸಕೋಟಿ ಸೇರಿದಂತೆ ಅನೇಕ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ನಿಮಿತ್ತವಾಗಿ ಮಧ್ಯಾಹ್ನ 4 ಗಂಟೆಗೆ ಸ್ಥಳೀಯ ನೂಲಿನ ಗಿರಣಿಯಿಂದ ಎಸ್‌ಆರ್‌ಎ ಮೈದಾನದವರೆಗೆ ಪುನೀತ ರಾಜಕುಮಾರ ಅವರ ಬೃಹತ್ ಭಾವಚಿತ್ರದ ಮೆರವಣಿಗೆ ನಡೆಯಲಿದೆ.

ಈ ಸಂದರ್ಭದಲ್ಲಿ ಕಾರ್ನಾಟಕದ ವಿವಿಧ ಭಾಗಗಳ ಖ್ಯಾತ ಹಾಡುಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಪುನೀತ ರಾಜುಕುಮಾರ ಅವರಿಗೆ ಗಾಯನ ನಮನವನ್ನು ಸಲ್ಲಿಸಲಿದ್ದಾರೆ ಎಂದು ರಾಯಪ್ಪ ದಡ್ಡಿಮನಿ ತಿಳಿಸಿದರು.

Advertisement

ಹಿರೇಮಠದ ಶರಣಬಸವ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಪರಪ್ಪ ಬರಗಲ್, ಮಹಾಲಿಂಗ ಪಾಲಭಾವಿ, ರಾಜು ಗುಂಡಿ, ಗಂಗಾಧರ ಗೊಬ್ಬಾಣಿ, ವಿನೋದ ಸುಟ್ಟಟ್ಟಿ, ಪ್ರಶಾಂತ ಅಂಬಿ, ವಿನಾಯಕ ಜೋತಾವರ, ಬಸವರಾಜ ಸಪ್ಪಲಾಡ, ಹನಮಂತ ಬಣಗಾರ, ಸುನೀಲ ಬೆಂಗೂಡಗಿ, ಶ್ರೀಕಾಂತ ಬಡಿಗೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next