Advertisement

ಅಪ್ಪು ವಿರುದ್ಧ ಆಕ್ಷೇಪ ಹೇಳಿಕೆ: ಪುನೀತ್‌ ಕೆರೆಹಳ್ಳಿ ಮೇಲೆ ಹಲ್ಲೆ

04:07 PM Dec 24, 2022 | Team Udayavani |

ಬೆಂಗಳೂರು: ವರನಟ ಡಾ ರಾಜ್‌ಕುಮಾರ್‌ ಕುಟುಂಬ ವಿರುದ್ಧ ಹಗುರವಾಗಿ ಮಾತನಾಡಿದ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿ ಮೇಲೆ ಕನ್ನಡಪರ ಸಂಘಟನೆ ಹೋರಾಟಗಾರ ಶಿವಕುಮಾರ್‌ ಮತ್ತು ತಂಡ ಹಲ್ಲೆ ನಡೆಸಿದೆ.

Advertisement

ಚಾಮರಾಜಪೇಟೆಯಲ್ಲಿ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಪುನೀತ್‌ ಕೆರೆಹಳ್ಳಿಯನ್ನು ಅಡ್ಡಗಟ್ಟಿ ಶಿವಕುಮಾರ್‌ ಮತ್ತು ತಂಡದವರು ಬಟ್ಟೆ ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿಯತ್ತಿದ್ದಂತೆ ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಘಟನೆ ಕುರಿತು ಪುನೀತ್‌ ಕೆರೆಹಳ್ಳಿ ಪುನೀತ್‌ ರಾಜ್‌ಕುಮಾರ್‌ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಎಂದು ಹೇಳಲಾಗಿದೆ. ಅದೇ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ವಾಗ್ವಾದ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಶುಕ್ರವಾರ ರಾತ್ರಿ ಪುನೀತ್‌ ಕೆರೆಹಳ್ಳಿಯೇ ಚಾಮರಾಜಪೇಟೆ ಬಳಿ ಬಂದಿದ್ದೇನೆ ಎಂದು ಅಹ್ವಾನ ನೀಡಿದ್ದಾನೆ. ಆಗ ಸ್ಥಳಕ್ಕೆ ಬಂದ ಶಿವಕುಮಾರ್‌ ಮತ್ತು ತಂಡದವರು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಪುನೀತ್‌ ಕೆರೆಹಳ್ಳಿ ನಿರಾಕರಿಸಿದ್ದಾನೆ. ಅದರಿಂದ ಹಲ್ಲೆ ನಡೆಸಿದ್ದಾರೆ. ಎಂದು ಪೊಲೀಸರು ಮಾಹಿತಿ ನೀಡಿದರು.

ಚಾಮರಾಜಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next